Congress MP Candidate Beaten: ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಗೆ  ಓರ್ವ ವ್ಯಕ್ತಿಯಿಂದ ಕಪಾಳಮೋಕ್ಷ !

ನವದೆಹಲಿ – ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಗೆ ವ್ಯಕ್ತಿಯೊಬ್ಬರು ಕೆನ್ನೆಗೆ ಹೊಡೆದಿದ್ದಾರೆ. ಮೇ 17ರ ಸಂಜೆ ಇಲ್ಲಿನ ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರಗೆ ಬಂದ ನಂತರ  ಈ ಘಟನೆ ನಡೆದಿದೆ.  ಈ ಸಂದರ್ಭದಲ್ಲಿ ಅವರ ಮೇಲೆ ಇಂಕನ್ನು ಎಸೆಯಲಾಯಿತು. ಹಾಗೆಯೇ  ಆಮ್ ಆದ್ಮಿ ಪಕ್ಷದ ಸ್ಥಳೀಯ ಕಾರ್ಪೊರೇಟರ್ ಛಾಯಾ ಗೌರವ್ ಶರ್ಮಾ ಅವರ ಮೇಲೂ ಗುಂಪು ನಿಂದನೆ ಆರೋಪ ಮಾಡಲಾಗಿದೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.  ಹಲ್ಲೆ ಆದ ನಂತರ  ಇಬ್ಬರು ವ್ಯಕ್ತಿಗಳ ವಿಡಿಯೋ ಪ್ರಸಾರ ಆಗಿದೆ.  ಈ ವಿಡಿಯೋದಲ್ಲಿ ಕನ್ಹಯ್ಯಾ ಕುಮಾರ್‌ ನನ್ನು ತಾವೇ ಹೊಡೆದಿರುವುದಾಗಿ ಈ ವ್ಯಕ್ತಿ ಒಪ್ಪಿಕೊಂಡಿದ್ದು ಕಾಣುತ್ತಿದೆ.  ಅವರಲ್ಲಿ ಒಬ್ಬನ ಹೆಸರು ದಕ್ಷ ಎಂದು ಹೇಳಲಾಗುತ್ತದೆ.  ‘ಭಾರತ್ ತೇರೆ ಟುಕಡೆ ಹೋಂಗೆ’ ಎಂದು ಹೇಳಲು ಯಾರಿಗೂ ಅವಕಾಶ ನೀಡುವುದಿಲ್ಲ.  ಕನ್ಹಯ್ಯಾ ಕುಮಾರ್ ಗೆ ಒಳ್ಳೆಯ ಪಾಠ ಕಲಿಸಲಾಯಿತು. ಇದೆಲ್ಲದರಲ್ಲಿ ನನ್ನ ತಲೆ ಸಿಡಿದಿದೆ ಎಂದು ಈ ವ್ಯಕ್ತಿ ವೀಡಿಯೋದಲ್ಲಿ ಹೇಳುತ್ತಿರುವುದು ಕಂಡು ಬಂದಿದೆ.