Dabholkar Murder Case : ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯನ್ನು ಸುಳ್ಳು ಆರೋಪದಡಿ ಸಿಲುಕಿಸಲಾಯಿತು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸುಪ್ರೀಂ ಕೋರ್ಟ್

ನ್ಯಾಯವಾದಿ ವಿಷ್ಣು ಶಂಕರ ಜೈನ್

ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಪುಣೆ ಸಿ.ಬಿ.ಐ. ವಿಶೇಷ ನ್ಯಾಯಾಲಯವು ಡಾ. ವೀರೇಂದ್ರ ಸಿಂಗ್ ತಾವಡೆ, ಶ್ರೀ. ವಿಕ್ರಮ್ ಭಾವೆ ಮತ್ತು ವಕೀಲ ಸಂಜೀವ್ ಪುನಾಳೆಕರ್ ಅವರನ್ನು ಖುಲಾಸೆಗೊಳಿಸಿದ್ದು ಅತ್ಯಂತ ಸಂತೋಷದ ಘಟನೆಯಾಗಿದೆ. ನ್ಯಾಯಾಲಯವು ಶರದ್ ಕಳಸ್ಕರ್ ಮತ್ತು ಸಚಿನ್ ಅಂದುರೆ ಇವರನ್ನು ದೋಷಿ ಎಂದು ತೀರ್ಪು ನೀಡಿದೆ. ಇದರ ವಿರುದ್ಧ ಮುಂಬಯಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದು ಆವಶ್ಯಕವಿದೆ. ಈ ಪ್ರಕರಣದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯನ್ನು ಸುಳ್ಳು ಆರೋಪದಡಿ ಸಿಲುಕಿಸಲಾಯಿತು. ತಪ್ಪಿತಸ್ಥರಾದ ಕಳಸ್ಕರ ಮತ್ತು ಅಂದುರೆ ಕೂಡ ಮುಂಬಯಿ ಹೈಕೋರ್ಟ್‌ನಲ್ಲಿ ದೋಷಮುಕ್ತರಾಗಲಿದ್ದಾರೆ ಎಂದು ಹೇಳಿದರು.