
ಪುಣೆ – ಆಗಸ್ಟ್ 20, 2013 ರಂದು, ಇಲ್ಲಿಯ ಮಹರ್ಷಿ ವಿಠ್ಠಲ ರಾಮಜಿ ಶಿಂಧೆ ಸೇತುವೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ಅಧ್ಯಕ್ಷ ಡಾ. ನರೇಂದ್ರ ದಾಭೋಲ್ಕರರ ಕೊಲೆ ಆಯಿತು. ಈ ಪ್ರಕರಣವನ್ನು ಆರಂಭದಲ್ಲಿ ಪುಣೆ ಪೊಲೀಸರಿಂದ, ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ನಡೆಸಲಾಗಿತ್ತು. ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿನ್ ಅಂದುರೆ, ಶರದ್ ಕಳಸ್ಕರ, ಸನಾತನದ ಸಾಧಕ ಡಾ. ವೀರೇಂದ್ರ ತಾವಡೆ, ವಿಕ್ರಮ ಭಾವೆ ಮತ್ತು ವಕೀಲ ಸಂಜೀವ ಪುನಾಳೆಕರ ಇವರನ್ನು ಬಂಧಿಸಲಾಯಿತು. ಇದಾದ ನಂತರ ಇಲ್ಲಿಯವರೆಗೆ ಅಂದರೆ 10 ವರ್ಷಗಳಿಗೂ ಹೆಚ್ಚು ಸಮಯದಿಂದ ಈ ಪ್ರಕರಣ ಬಾಕಿ ಉಳಿದಿತ್ತು. ಪ್ರಕರಣದ ಆಲಿಕೆಯು ವಿಶೇಷ ನ್ಯಾಯಾಧೀಶ ಪಿ.ಪಿ. ಜಾಧವ್ ಅವರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈಗ, ಇಷ್ಟು ಸುದೀರ್ಘ ಸಮಯದ ನಂತರ, ಈ ಬಹುಚರ್ಚಿತ ಪ್ರಕರಣದ ತೀರ್ಪು ಅಂತಿಮವಾಗಿ ಮೇ 10, 2024 ರಂದು ಬರುವ ಸಾಧ್ಯತೆಯಿದೆ.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !