ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ದರ್ಶನ ಪಡೆದ ೨೫೦ ಪಾಕಿಸ್ತಾನಿ ಹಿಂದೂಗಳು !

ಅಯೋಧ್ಯೆ (ಉತ್ತರಪ್ರದೇಶ) – ಪಾಕಿಸ್ತಾನದಿಂದ ಬಂದ ೨೫೦ ಹಿಂದೂಗಳು ಅಯೋಧ್ಯೆಯಲ್ಲಿ ಶರಯೂ ನದಿಯಲ್ಲಿ ಸ್ನಾನ ಮಾಡಿ ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಜೊತೆಗೆ ಅಯೋಧ್ಯೆಯಲ್ಲಿನ ಹನುಮಾನಗಢಿ, ಕನಕ ಭವನ ಮುಂತಾದ ಇತರ ಪ್ರಾಚೀನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಛತ್ತೀಸ್ಗಡದಲ್ಲಿನ ರಾಯಪುರ ಇಲ್ಲಿಯ ಪ್ರಸಿದ್ಧ ಶದಾನಿ ದರಬಾರದ ಪ್ರಮುಖ ಪೂ. ಡಾ. ಯುಧಿಷ್ಠಿರ ಲಾಲ ಇವರು ದರ್ಶನಕ್ಕಾಗಿ ನೇತೃತ್ವ ವಹಿಸಿದ್ದರು. ಪೂ. ಡಾ. ಯುಧಿಷ್ಠಿರ ಲಾಲ್ ಇವರು, ಯಾವ ರೀತಿ ೫೦೦ ವರ್ಷಗಳ ನಂತರ ಶ್ರೀರಾಮ ಜನ್ಮ ಭೂಮಿ ನಮಗೆ ದೊರೆತಿದೆ ಮತ್ತು ಅಲ್ಲಿ ಭವ್ಯ ಶ್ರೀರಾಮ ಮಂದಿರ ಕಟ್ಟಲಾಗಿದೆ. ಅದರಂತೆಯೇ ಪಾಕಿಸ್ತಾನದ ಸಿಂಧಪ್ರಾಂತ ಕೂಡ ಮತ್ತೊಮ್ಮೆ ಭಾರತದ ಭಾಗವಾಗುವುದು ಎಂದು ಹೇಳಿದರು.
೧. ಸಿಂಧ ಪ್ರಾಂತದಲ್ಲಿನ ಜರವಾರ ಗ್ರಾಮದಿಂದ ಬಂದಿರುವ ಗೋವಿಂದ ರಾಮ ಮಾಖೇಜ ಇವರು ಮಾತನಾಡಿ, ಭಾರತದಲ್ಲಿ ಪೂರ್ಣಶಾಂತಿ ಇದೆ, ತಡ ರಾತ್ರಿಯವರೆಗೆ ಜನರು ರಸ್ತೆಯಲ್ಲಿ ಓಡಾಡಬಹುದು. ವ್ಯಾಪಾರ ಮಾಡಬಹುದು. ಎಲ್ಲಾ ಹಬ್ಬಗಳು ಉತ್ಸಾಹದಿಂದ ಮತ್ತು ಶ್ರದ್ಧೆಯಿಂದ ಆಚರಿಸಬಹುದು. ಮೆರವಣಿಗೆ ನಡೆಸಬಹುದು. ಆದರೆ ಪಾಕಿಸ್ತಾನದಲ್ಲಿ ಹಿಂದುಗಳಿಗೆ ಈ ರೀತಿ ಹಬ್ಬ ಆಚರಿಸುವ ಸ್ವಾತಂತ್ರ್ಯವಿಲ್ಲ ಎಂದು ಹೇಳಿದರು.
೨. ಸಿಂಧದಲ್ಲಿನ ಮೀರಪುರ ಮಾಥೆಲೋ ಇಲ್ಲಿಯ ನಿವಾಸಿ ಓಂಪ್ರಕಾಶ ಇವರು, ಪಾಕಿಸ್ತಾನದಲ್ಲಿ ಯಾವಾಗಲೂ ಭಯದ ವಾತಾವರಣ ಇರುತ್ತದೆ. ಭಾರತದಲ್ಲಿ ಸೊಸೆ ಸುರಕ್ಷಿತವಾಗಿದ್ದಾಳೆ, ಆದರೆ ಪಾಕಿಸ್ತಾನದಲ್ಲಿ ಸಂಜೆ ಮಗಳು ಮನೆಗೆ ಹಿಂತಿರುಗಿ ಬರಲಿಲ್ಲ, ಅಂದರೆ ಏನಾದರೂ ಅಯೋಗ್ಯ ಘಟನೆ ಘಟಿಸಿರಬಹುದೆ ಎಂದು ಭಯ ಕಾಡುತ್ತದೆ ಎಂದು ಹೇಳಿದರು.
ಭಾರತದ ಮೇಲೆ ದಾಳಿಯಾದರೆ ನಾವು ಭಾರತದೊಂದಿಗೆ ಇರುತ್ತೇವೆ! – ಟ್ರಂಪ್
ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು! – Trump On Iran
ಇರಾನ್ಗೆ ಈಗ ಅಣುಬಾಂಬ್ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!
ಅತ್ಯಾಚಾರ ಪ್ರಕರಣದಲ್ಲಿ ನಾರ್ವೆಯ ‘ ಕ್ರೌನ್ ಪ್ರಿನ್ಸೆಸ್’ ನ ಮಗನಿಗೆ ೪ ವರ್ಷಗಳ ಜೈಲು ಶಿಕ್ಷೆ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
ಅಮೆರಿಕದಲ್ಲಿ ಬಾಂಬರ್ ವಿಮಾನ ಪತನ: ೮ ಜನರ ಸಾವು