Targeted Killings in J&K: ರಜೌರಿಯಲ್ಲಿ (ಜಮ್ಮು ಕಾಶ್ಮೀರ) ಭಯೋತ್ಪಾದಕರಿಂದ ಸರ್ಕಾರಿ ನೌಕರನ ಹತ್ಯೆ

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ರಜ್ಜಾದ್ ಎಂಬ ಸ್ಥಳೀಯ ವ್ಯಕ್ತಿಯನ್ನು ಜಿಹಾದಿ ಉಗ್ರರು ಆತನ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಅವರು ರಜೌರಿ ನಿವಾಸಿಯಾಗಿದ್ದರು. ಅವರ ಸಹೋದರ ಸೇನೆಯಲ್ಲಿ ಯೋಧರಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಮತ್ತು ಸೇನೆಯ ಜಂಟಿ ತಂಡವು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ತಿಂಗಳಲ್ಲಿ ನಡೆದ ಮೂರನೇ ಟಾರ್ಗೆಟ್ ಕಿಲ್ಲಿಂಗ್ ಆಗಿದೆ. ಈ ಹಿಂದೆ ಇಬ್ಬರು ಕಾಶ್ಮೀರೇತರರನ್ನು ಹತ್ಯೆ ಮಾಡಲಾಗಿತ್ತು. ಅದರಲ್ಲಿ ಒಬ್ಬ ಹಿಂದೂ ಮತ್ತು ಒಬ್ಬ ಸಿಖ್ ಸೇರಿದ್ದರು.

ಸಂಪಾದಕೀಯ ನಿಲುವು

34 ವರ್ಷಗಳಿಂದ ಅಸುರಕ್ಷಿತ ಇರುವ ಕಾಶ್ಮೀರ ಎಲ್ಲಾ ಪಕ್ಷದ ಸರ್ಕಾರಗಳಿಗೆ ನಾಚಿಕೆಗೇಡು !