
ಮಥುರಾ (ಉತ್ತರ ಪ್ರದೇಶ) – ಹಿಂದೂ ಮಹಿಳೆಯರು ಇಲ್ಲಿಯ ಶ್ರೀ ಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯಲ್ಲಿರುವ ಕೃಷ್ಣಭಾವಿಯ ಪೂಜೆ ಮಾಡಿದರು. ಶಿತಲಾ ಅಷ್ಟಮಿಯ ದಿನದಂದು ಮಹಿಳೆಯರು ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ಮಾಡುತ್ತಾರೆ. ಈ ಕೃಷ್ಣ ಬಾವಿಯ ಪೂಜೆ ಮಾಡುವ ಅಧಿಕಾರಕ್ಕಾಗಿ ಈ ಹಿಂದೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಶ್ರೀ ಕೃಷ್ಣಜನ್ಮ ಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷ ಮಹೇಂದ್ರ ಪ್ರತಾಪ ಸಿಂಹ ಇವರು ಅರ್ಜಿ ದಾಖಲಿಸಿದ್ದರು. ನ್ಯಾಯಾಲಯವು ಪೂಜೆಗೆ ಅನುಮತಿ ನೀಡಿತ್ತು.
(ಸೌಜನ್ಯ – Zee Uttar Pradesh UttaraKhand)
೧. ಸಿಕ್ಕಿರುವ ಮಾಹಿತಿಯ ಪ್ರಕಾರ ೩೪ ಹಿಂದೂ ಮಹಿಳೆಯರು ಏಪ್ರಿಲ್ ೧ ಬೆಳಗಿನ ಜಾವ ೫ ಗಂಟೆಗೆ ಕೃಷ್ಣ ಬಾವಿಯ ಹತ್ತಿರ ತಲುಪಿ ಶೀತಲ ಮಾತೆಯ ಪೂಜೆ ಮಾಡಿದರು. ಅವರಲ್ಲದೆ ಇತರ ಯಾರಿಗೂ ಕೂಡ ಅನುಮತಿ ನೀಡಲಾಗಿರಲಿಲ್ಲ. ಆದ್ದರಿಂದ ಪೂಜೆ ಮಾಡುವುದಕ್ಕಾಗಿ ಬಂದಿರುವ ಇತರ ೭ ಜನರನ್ನು ಪೊಲೀಸರು ವಶಕ್ಕೆ ಪಡೆದರು. ಈ ಜನರಲ್ಲಿ ಶ್ರೀ ಕೃಷ್ಣಜನ್ಮಭೂಮಿ ಸಂಘರ್ಷ ಟ್ರಸ್ಟಿನ ಅಧ್ಯಕ್ಷ ದಿನೇಶ್ ಶರ್ಮ ಇವರ ಸಮಾವೇಶ ಕೂಡ ಇದೆ. ಶೀತಲಾ ಅಷ್ಟಮಿಯ ದಿನದಂದು ಮಸೀದಿಗೆ ಹೋಗಿ ಪೂಜೆ ಮಾಡುವರು ಎಂದು ಈ ಜನರು ಮೊದಲೇ ಘೋಷಿಸಿದ್ದರು. ಈ ಪರಿಸರದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ.
೨. ಇಲ್ಲಿಯ ಮಹಿಳೆಯರು ಹೋಳಿಯ ನಂತರ ಈ ಕೃಷ್ಣಬಾವಿಯ ಸ್ಥಳಕ್ಕೆ ಹೋಗಿ ಶೀತಲಾ ಮಾತೆಯ ಪೂಜೆ ಮಾಡುತ್ತಾರೆ. ಈ ಪೂಜೆ ಬಹಳ ದಿನಗಳಿಂದ ನಡೆಯುತ್ತಿದೆ; ಆದರೆ ಯಾವಾಗ ಹಿಂದೂಗಳು ಶ್ರೀ ಕೃಷ್ಣಜನ್ಮಭೂಮಿಯ ಸಮೀಕ್ಷೆ ನಡೆಸಲು ಆಗ್ರಹಿಸಿದರು, ಅಂದಿನಿಂದ ಮುಸಲ್ಮಾನರು ಇಲ್ಲಿ ಪೂಜೆ ನಡೆಯಬಾರದು, ಅದಕ್ಕಾಗಿ ಅಡೆತಡೆ ತರಲು ಆರಂಭಿಸಿದರು. ಕಳೆದ ವರ್ಷ ಕೂಡ ಹಾಗೆಯೇ ನಡೆದಿತ್ತು. ಈ ಬಾರಿ ಹಿಂದುಗಳಿಗಾಗಿ ಧಾರ್ಮಿಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದು ಭಗವಾನ್ ಶ್ರೀ ಕೃಷ್ಣನ ಮರಿ ಮೊಮ್ಮಗ ವಜ್ರನಾಭ ಎಂಬವರು ಕಟ್ಟಿದ್ದರು.
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!