ಸಂದೇಶಖಾಲಿ (ಬಂಗಾಲ)ಯಲ್ಲಿ ಆಡಳಿತಾರೂಢ ಪಕ್ಷದಿಂದ ಹಿಂದೂ ಮಹಿಳೆಯರ ಮೇಲೆ ನಡೆದ ಲೈಂಗಿಕ ಅತ್ಯಾಚಾರದ ಪ್ರಕರಣ

ಡೆಹರಾಡೂನ್ (ಉತ್ತರಾಖಂಡ) – ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಬಂಗಾಲದ ಸಂದೇಶಖಾಲಿ ಇಲ್ಲಿ ಮಹಿಳೆಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರ ಕುರಿತು ಹೇಳಿಕೆ ನೀಡಿದರು. ಶಂಕರಾಚಾರ್ಯರಿಗೆ ಈ ಕುರಿತು ಪ್ರಶ್ನೆ ಕೇಳಿದಾಗ ಅವರು, ಇಂತಹ ಘಟನೆ ಘಟಿಸುವುದು, ಇದು ರಾಜ್ಯದ ವಿಫಲತೆ ಆಗಿದೆ. ಮೂಲತಹ ರಾಜ್ಯದ ಸ್ಥಾಪನೆ ಏಕೆ ಆಯಿತು, ದುರ್ಬಲರ ಮೇಲೆ ದೌರ್ಜನ್ಯ ನಡೆಯಬಾರದೆಂದು, ಆದರೆ ಮಾತಾ ಭಗಿನಿಯರು ನೀವು (ರಾಜಕಾರಣಿಗಳು) ಅವರನ್ನು ರಕ್ಷಣೆ ಮಾಡಬೇಕು ಎಂದು ಅಪೇಕ್ಷಿಸುತ್ತಾರೆ; ಆದರೆ ಅವರ ಮೇಲೆ ಅತ್ಯಾಚಾರ ಮತ್ತು ಅನ್ಯಾಯ ಆಗುತ್ತಿದ್ದರೆ, ಅದು ರಾಜ್ಯದ ವಿಫಲತೆ ಆಗಿದ್ದು ಈ ಕೃತ್ಯ ಅಸ್ವಿಕಾರಾರ್ಹವಾಗಿದೆ. ವಿಶೇಷವಾಗಿ ಯಾವಾಗ ಒಬ್ಬ ತಾಯಿ ಅಥವಾ ಸಹೋದರಿ (ಮಮತಾ ಬ್ಯಾನರ್ಜಿ) ರಾಜ್ಯವನ್ನು ಆಳುತ್ತಿದ್ದರೆ ಆಗ ಅಲ್ಲಿಯ ಈ ಅಂಶಗಳು ಗಂಭೀರವಾಗುತ್ತವೆ.
ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಸಲ್ಮಾನ ನಾಯಕ ಮತ್ತು ಅವನ ಕಾರ್ಯಕರ್ತರು ಇಲ್ಲಿಯ ಹಿಂದೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಘಟಿಸಿದ್ದವು. ಈ ಪ್ರಕರಣದ ಶೋಧ ನಡೆಸಿರುವ ಕೇಂದ್ರ ತನಿಖಾ ದಳವು ಶೇಖ ಶಾಹಾಜಹಾನನ್ನು ಬಂಧಿಸಿದ್ದಾರೆ.
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ