ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯನ್ನು ತನ್ನ ವಾಟ್ಸಪ್ ಸ್ಟೇಟಸ್ ಪೋಸ್ಟ್ ನಲ್ಲಿ ಬೆಂಬಲಿಸಿದ್ದ ಮುಸಲ್ಮಾನ ಪೊಲೀಸ್ ಹವಾಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ !

(ಸ್ಟೇಟಸ್ ಎಂದರೆ ಇತರರು ನೋಡಲು ಸಾಮಾಜಿಕ ಮಾಧ್ಯಮದ ಸ್ವಂತ ಖಾತೆಯಲ್ಲಿ ಪ್ರಸಾರ ಮಾಡಿರುವ ಚಿತ್ರ ಅಥವಾ ಬರಹ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರ್ ಆಗಿರುವ ಫಯಾಜ್ ಖಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದ ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯನ್ನು ಹೊಗಳುವ 2 ಪೋಸ್ಟ್ ಗಳನ್ನು ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಪ್ರಸಾರ ಮಾಡಿದ್ದನು, ಮುಖ್ತಾರ್ ಅನ್ಸಾರಿಯನ್ನು `ಶೇರ್-ಎ- ಪೂರ್ವಾಂಚಲ್’ (ಉತ್ತರಪ್ರದೇಶದ ಪೂರ್ವ ಪ್ರದೇಶವನ್ನು ಪೂರ್ವಾಂಚಲ್ ಎಂದು ಹೇಳುತ್ತಾರೆ) ಎಂದು ಹೇಳಿದ್ದನು. ಈ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಫಯಾಜ್ ಖಾನ್ ನ ಅಮಾನತ್ತಿನ ವರದಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದು, ಚುನಾವಣಾ ಆಯೋಗದ ಅನುಮತಿಯ ಬಳಿಕ ಖಾನ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

(ಸೌಜನ್ಯ – Nation One News)

ಸಂಪಾದಕೀಯ ನಿಲುವು

ಧರ್ಮದ ಆಧಾರದಲ್ಲಿ ಕುಖ್ಯಾತ ಗೂಂಡಾನನ್ನು ಬೆಂಬಲಿಸುವ ಮುಸಲ್ಮಾನ ಪೊಲೀಸರು ಜನರನ್ನು ಅದರಲ್ಲೂ ವಿಶೇಷವಾಗಿ ಹಿಂದೂಗಳನ್ನು ಎಂದಾದರೂ ರಕ್ಷಿಸಲು ಸಾಧ್ಯವೇ ?