ಬೇವಿನ ಎಲೆಯ ಮಹತ್ವ

ಬ್ರಹ್ಮಧ್ವಜಕ್ಕೆ ಬೇವಿನ ಎಲೆಯ ಮಾಲೆ ಹಾಕುತ್ತಾರೆ. ಬೇವಿನ ಎಲೆ ಇದು ಸತ್ವ ಲಹರಿಗಳ ಪ್ರತೀಕವಾಗಿದೆ. ಈಶ್ವರಿ ತತ್ವ ಸೆಳೆದುಕೊಳ್ಳುವ ಕ್ಷಮತೆ ಮಾವಿನ ಎಲೆಯ ನಂತರ ಬೇವಿನ ಎಲೆಯಲ್ಲಿ ಹೆಚ್ಚಾಗಿ ಇರುತ್ತದೆ. ಈ ದಿನದಂದು ಬೇವಿನ ಚಿಗುರು ಎಲೆಯ ಮೂಲಕ ವಾತಾವರಣದಲ್ಲಿ ಪಸರಿಸಿರುವ ಪ್ರಜಾಪತಿ ಲಹರಿ ಸೆಳೆದುಕೊಳ್ಳುತ್ತದೆ. ಜೀವಗಳಿಗೆ ಬೇವಿನ ಎಲೆಯ ಮಾಧ್ಯಮದಿಂದ ಸೂಕ್ಷ್ಮ ರೂಪದಲ್ಲಿ ಪ್ರಜಾಪತಿ ಲಹರಿಗಳು ಸಿಗುತ್ತವೆ.

ಮಿತ್ರರೇ, ಯುಗಾದಿಯಂದು ಇವನ್ನು ಅವಶ್ಯ ಮಾಡಿ !

೧.  ಯುಗಾದಿಯಂದು ವರ್ಷಾರಂಭ ಮಾಡಲು ಎಲ್ಲರನ್ನು ಪ್ರವೃತ್ತಗೊಳಿಸಿ

೨.  ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಯುಗಾದಿಯ ಮಹತ್ವದ ಬಗ್ಗೆ ವ್ಯಾಖ್ಯಾನಗಳನ್ನು ಆಯೋಜಿಸಲು ಪ್ರೇರೇಪಿಸಿ. ಈ ದಿನವನ್ನು ‘ಸಂಸ್ಕೃತಿ ದಿನ’ (ಕಲ್ಚರಲ್‌ ಡೇ) ಎಂದು ಆಯೋಜಿಸುವಂತೆ ಕೇಳಿ. ನೋಟೀಸ್‌ ಬೋರ್ಡ್ ಮೇಲೆ ಯುಗಾದಿಯ ಶುಭಾಶಯಗಳನ್ನು ತಿಳಿಸಲು ಮತ್ತು ಯುಗಾದಿಯ ಮಹತ್ವವನ್ನು ತಿಳಿಸುವಂತಹ ಲೇಖನಗಳನ್ನು ಅಂಟಿಸಲು ಪ್ರವೃತ್ತಗೊಳಿಸಿ.

೩.  ನಿಮ್ಮ ಮನೆಯ ಮುಂದೆ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿ.