ದೆಹಲಿಯ ‘ಜೆಎನ್‌ಯು’ ವಿಶ್ವವಿದ್ಯಾಲಯದಲ್ಲಿ ಭಗವಾನ್ ಶ್ರೀರಾಮನ ಬಗ್ಗೆ ಖೇದಕರ ಘೋಷಣೆ !

ನವದೆಹಲಿ – ಇಲ್ಲಿ ‘ಜೆಎನ್‌ಯು’ (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ದ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಕೆಲವು ವಿದ್ಯಾರ್ಥಿಗಳು ಡಫಲಿ ಬಾರಿಸುತ್ತಾ, ‘ಮಿಲೆ ಫುಲೆ- ಕಾಂಶಿರಾಮ್ (ಜ್ಯೋತಿಬಾ ಫುಲೆ ಮತ್ತು ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾಂಶಿರಾಮ್ ಒಂದು ಸೇರಿದ್ದರಿಂದ), ಹವಾ ಮೇ ಉಡ ಗಯೇ ಜಯ ಶ್ರೀ ರಾಮ’ ಎಂದು ಕೂಗುತ್ತಿರುವುದು ಕಂಡು ಬಂದಿತು. ‘ಬ್ರಾಹ್ಮಣವಾದದಿಂದ ಮುಕ್ತಿ’, ‘ಆಜಾದಿ’ ಮತ್ತು ‘ಫ್ರೀ ಪ್ಯಾಲೆಸ್ತೀನ್’ ಎಂಬ ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವೂ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು. ಅವರನ್ನು ‘ಕಳ್ಳ’ ರೆಂದು ಬಣ್ಣಿಸುತ್ತಿದ್ದರು.

(ಸೌಜನ್ಯ – Aayudh)

ಸಂಪಾದಕೀಯ ನಿಲುವು

ಜೆಎನ್‌ಯುನಲ್ಲಿ ಕೈ ಬೆರಳೆಣಿಕೆಯಷ್ಟು ಇರುವ ಕಮ್ಯುನಿಸ್ಟ್ ವಿಚಾಧಾರೆಯ ವಿದ್ಯಾರ್ಥಿಗಳು ದೇಶ ಮತ್ತು ಹಿಂದೂ ವಿರೋಧಿ ವಾತಾವರಣವನ್ನು ನಿರ್ಮಾಣ ಮಾಡಿ ಇತರ ವಿದ್ಯಾರ್ಥಿಗಳ ಮನಸ್ಸನ್ನು ಕಲುಷಿತಗೊಳಿಸುತ್ತಿರುವುದರಿಂದ, ಈ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದಿಂದ ವಜಾಗೊಳಿಸುವುದು ಅಥವಾ ವಿಶ್ವವಿದ್ಯಾಲಯವನ್ನೇ ಮುಚ್ಚುವುದು ಆವಶ್ಯಕವಾಗಿದೆ !