ಭರತಪುರ (ರಾಜಸ್ಥಾನ) ಇಲ್ಲಿ ೨೦ ಸಾವಿರ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ !

  • ಮತಾಂತರ ಹಿಂದೆ ಇಟಲಿಯ ಸಂಘಟನೆ !

  • ರಾಜಸ್ಥಾನದ ಅನೇಕ ಗ್ರಾಮಗಳಲ್ಲಿ ಮತಾಂತರದ ಕೇಂದ್ರಗಳು ಕಾರ್ಯನಿರತ !

ಭರತಪುರ (ರಾಜಸ್ಥಾನ) – ರಾಜ್ಯದಲ್ಲಿ ಸತ್ಸಂಗದ ಹೆಸರಿನಲ್ಲಿ ಹಿಂದುಗಳಿಗೆ ಹಣ ಮತ್ತು ಆಹಾರ ಸಾಮಗ್ರಿ ನೀಡುವ ಆಮಿಷ ಒಡ್ಡಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಈ ಮತಾಂತರದ ಹಿಂದೆ ಇಟಲಿಯ ಒಂದು ಸಂಘಟನೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ರಾಜಸ್ಥಾನದ ಅನೇಕ ಗ್ರಾಮಗಳಲ್ಲಿ ಮತಾಂತರದ ಕೇಂದ್ರಗಳು ಕಾರ್ಯನಿರತವಾಗಿದೆ. ಭರತಪುರದಲ್ಲಿ ಸುಮಾರು ೨೦ ಸಾವಿರ ಹಿಂದುಗಳ ಮತಾಂತರವಾಗಿರುವ ಮಾಹಿತಿ ಕೂಡ ಬೆಳಕಿಗೆ ಬಂದಿದೆ.

ಮತಾಂತರದ ವಿಚಾರಣೆ ಮಾಡುವುದಕ್ಕಾಗಿ ವಿಶೇಷ ತನಿಖಾ ತಂಡದ ಸ್ಥಾಪನೆ !

ಮತಾಂತರಕ್ಕಾಗಿ ಪ್ರಾರ್ಥನಾ ಸಭೆಯ ಆಯೋಜನೆ ಮಾಡುತ್ತಿದ್ದರು. ಈ ಪ್ರಾರ್ಥನಾ ಸಭೆಗೆ ಬರುವ ಹಿಂದುಗಳಿಗೆ ಆಹಾರ ಸಾಮಗ್ರಿ ನೀಡುತ್ತಿದ್ದರು. ‘ಕಾಯಿಲೆಗಳು ವಾಸಿ ಆಗುತ್ತದೆ’, ಎಂದು ಭರವಸೆ ನೀಡುತ್ತಿದ್ದರು. ಅಸಹಾಯಕ ಹಿಂದುಗಳ ಆರ್ಥಿಕ ಸಮಸ್ಯೆಗಳು ಪರಿಹರಿಸುತ್ತಿದ್ದರು. ಬಡವರ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ಸಹಾಯ ನೀಡುವ ಆಮಿಷ ಒಡ್ಡುತ್ತಿದ್ದರು. ಚಿಕ್ಕ ಪ್ರಾರ್ಥನಾ ಸಭೆಯಿಂದ ಆರಂಭ ಮಾಡಿ ಈ ಷಡ್ಯಂತ್ರ ದೊಡ್ಡ ದೊಡ್ಡ ಫಾರಂ ಹೌಸ್, ರೆಸಾರ್ಟ್ಸ್, ಹೋಟೆಲ್ಸ್ ಇಲ್ಲಿಯವರೆಗೆ ತಲುಪಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡುತ್ತಿದ್ದರು. ಈ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದ ನಂತರ ಅದರ ತನಿಖೆ ಆರಂಭವಾಗಿದೆ. ಅದಕ್ಕಾಗಿ ವಿಶೇಷ ತನಿಖಾ ತಂಡದ ಸ್ಥಾಪನೆ ಕೂಡ ಮಾಡಿದ್ದಾರೆ.

ಮತಾಂತರಕ್ಕಾಗಿ ೨ ಲಕ್ಷದಿಂದ ೫ ಲಕ್ಷದವರೆಗೆ ಆಮಿಷ !

ಸ್ಥಳೀಯ ಜನರು, ಹಿಂದುಗಳಿಗೆ ಕ್ರೈಸ್ತ ಧರ್ಮ ಸ್ವೀಕರಿಸಲು ೨ ಲಕ್ಷದಿಂದ ೫ ಲಕ್ಷ ರೂಪಾಯಿ ನೀಡಲಾಗುತ್ತದೆ. ಮಾಜಿ ಸರಪಂಚ ತುಹೀರಾಮ ಇವರು, ಅವರು ಮತಾಂತರದ ಕೃತ್ಯದಲ್ಲಿ ತೊಡಗಿರುವವರನ್ನು ಈ ಹಿಂದೆ ಕೂಡ ತಾಕಿತ್ತು ಮಾಡಿದ್ದರು; ಆದರೆ ಅವರು ಅದನ್ನು ಒಪ್ಪಲಿಲ್ಲ, ಎಂದು ಹೇಳಿದರು.

ಮತಾಂತರಕ್ಕೆ ‘ಇಟಲಿ ಕನೆಕ್ಷನ್’ !

ಭರತಪುರದಲ್ಲಿ ನಡೆಯುತ್ತಿರುವ ಕ್ರೈಸ್ತ ಮಿಶಿನರಿ ಆಟದಲ್ಲಿ ‘ಲಭಾನಾ ಮಿನಿಸ್ಟರ್’ ಹೆಸರು ಬೆಳಕಿಗೆ ಬಂದಿದೆ. ‘ಲಭಾನ ಮಿನಿಸ್ಟರಿ’ ಇದು ಇಟಲಿಯ ಸಂಸ್ಥೆಯಾಗಿದೆ. ಇದು ಕ್ರೈಸ್ತರ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ಭರತಪುರದ ಪಿಪಳಾ, ಕಾಂಜೋಲಿ, ಗುಂಡವಾ, ಬಾಢರಾ, ನೋಹ ಬಹಾಮಡಿ, ಬಹನೇರಾ, ರೂಪವಾಸ, ಗಘಿನಾ, ಬಾಯಣಾ ಮುಂತಾದ ಸ್ಥಳಗಳಲ್ಲಿ ಕ್ರೈಸ್ತ ಮತಾಂತರ ಕೇಂದ್ರಗಳು ನಡೆಯುತ್ತವೆ.

ಪಾಸ್ಟರ್ ಬಜಿಂದರ್ ಸಿಂಹ ಮುಖ್ಯ ಆರೋಪಿ !

(ಪಾಸ್ಟರ್ ಎಂದರೆ ಧರ್ಮ ಪ್ರಚಾರಕ)

ಭರತಪುರ ಇಲ್ಲಿಯ ಒಂದು ಹೋಟೆಲನಲ್ಲಿ ಫೆಬ್ರುವರಿ ೧೧ ರಂದು ಪೊಲೀಸರು ಕ್ರೈಸ್ತ ಮಿಷಿನರಿಗಳ ಮತಾಂತರದ ದೊಡ್ಡ ಷಡ್ಯಂತ್ರ ವಿಫಲಗೊಳಿಸಿದರು. ಈ ಕಾರ್ಯಕ್ರಮದಲ್ಲಿ ೩೫೦ ರಿಂದ ೫೦೦ ಜನರು ಸಹ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಪಾಸ್ಟರ್ ಬಜಿನ್ದರ್ ಸಿಂಹ ಚಂದಿಗಡದಿಂದ ನೇರ ಜೋಡಣೆಯಾಗಿದ್ದನು. ಹಿಂದೂಗಳಿಗೆ ವಿವಿಧ ಆಮಿಷ ತೋರಿಸಿ ಅವರನ್ನು ಮತಾಂತರಗೊಳಿಸುತ್ತಿದ್ದರು. ಈ ಕಾರ್ಯಕ್ರಮದ ಆಯೋಜಕ ಕುವರ್ ಸಿಂಹ ಮತ್ತು ಶೈಲೇಂದ್ರ ಸಿಂಹ ಇವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಭರತಪುರ ಒಂದರಲ್ಲಿಯೇ ೨೦ ಸಾವಿರಕ್ಕಿಂತಲೂ ಹೆಚ್ಚಿನ ಜನರನ್ನು ಮತಾಂತರಗೊಳಿಸಿದ್ದಾನೆ.

ಸಂಪಾದಕೀಯ ನಿಲುವು

ಮತಾಂತರದ ಈ ಘಟನೆಯ ಹಿಂದೆ ಇಟಲಿಯ ಸಂಘಟನೆಯ ಕೈವಾಡ ಇರುವುದು ಇದು ಕಾಂಗ್ರೆಸ್ಸಿನ ಷಡ್ಯಂತ್ರವಾಗಿದೆ. ಅಥವಾ ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ಈ ಸಂಘಟನೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಯಾರಾದರೂ ಆರೋಪಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?

ರಾಜಸ್ಥಾನದಲ್ಲಿ ಈಗ ಭಾಜಪದ ಅಧಿಕಾರ ಇರುವುದರಿಂದ ಅವರು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಬೇಕೆಂದು ಹಿಂದುಗಳಿಗೆ ಅನಿಸುತ್ತದೆ !