|

ಡೆಹರಾಡೂನ್ (ಉತ್ತರಾಖಂಡ) – ಫೆಬ್ರವರಿ ೮ ರಂದು ರಾಜ್ಯದ ಹಲ್ದ್ವಾನಿಯ ಬನಭೂಲಪುರ ಪ್ರದೇಶದಲ್ಲಿ ಮತಾಂಧ ಮುಸಲ್ಮಾನರು ಗಲಭೆ ನಡೆಸಿದ್ದರು. ಸ್ಥಳೀಯ ಆಡಳಿತವು ಬುಲ್ಡೋಜರ್ಮೂಲಕ ಅಲ್ಲಿನ ಕಾನೂನುಬಾಹಿರ ಮಸೀದಿ ಮತ್ತು ಮದರಸಾಗಳನ್ನು ಕೆಡವಿದ ನಂತರ ಆಕ್ರೋಶಗೊಂಡ ಮುಸ್ಲೀಮರು ಪೋಲೀಸರ ಮೇಲೆ ದಾಳಿ ಮಾಡಿದರು. ಆ ವೇಳೆ ಅವರು ಪೋಲೀಸರ ಶಸ್ತ್ರಾಸ್ತ್ರಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಈ ದಾಳಿಯಲ್ಲಿ ೫ ಗಲಭೆಕೋರರು ಸೇರಿದಂತೆ ೬ ಜನರು ಸಾವನ್ನಪ್ಪಿದ್ದಾರೆ ಹಾಗೂ ೩೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆನಂತರ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ‘ಎಲ್ಲಿ ಆಕ್ರಮ ಮಸೀದಿ ಇತ್ತೋ, ಅಲ್ಲಿ ಪೋಲೀಸ್ ಠಾಣೆ ನಿರ್ಮಿಸಲಾಗುವುದು‘, ಎಂದು ಘೋಷಣೆ ಮಾಡಿದರು. ಅದರಂತೆ ೨೪ ಗಂಟೆಯೊಳಗೆ ಅಲ್ಲಿ ಪೋಲೀಸ್ ಚೌಕಿ ನಿರ್ಮಿಸಲಾಗಿದೆ. ಹಿಂಸಾಚಾರದಲ್ಲಿ ಗಾಯಗೊಂಡ ಇಬ್ಬರು ಮಹಿಳಾ ಪೋಲಿಸರಿಂದ ಈ ಪೋಲೀಸ್ ಠಾಣೆಯ ಉದ್ಘಾಟನೆ ಮಾಡಲಾಗಿದೆ. ಈ ಸ್ಥಳದಲ್ಲಿ ಈಗ ೨೪ ಗಂಟೆ ಪೋಲೀಸ್ ಬಂದೋಬಸ್ತ್ ಇರುವುದು. ನೈನಿತಾಲ್ನ ಹಿರಿಯ ಪೋಲೀಸ್ ಆಯುಕ್ತ ಪ್ರಹ್ಲಾದ ನಾರಯಣ ಮೀನಾ ಇವರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಪೋಲೀಸ್ ಚೌಕಿಯ ಜವಾಬ್ದಾರಿಯನ್ನು ಮುಖ್ಯ ಹವಾಲ್ದಾರರಿಗೆ ವಹಿಸಲಾಗಿದ್ದು, ಅವರೊಂದಿಗೆ ೪ ಹವಾಲ್ದಾರರು ಮತ್ತು ಸಿಪಾಯಿ ಕರ್ಮಚಾರಿಗಳನ್ನು ನಿಯೋಜಿಸಲಾಗಿದೆ.
मा०मुख्यमंत्री जी द्वारा बनभूलपुरा में सुरक्षा व्यवस्था को लेकर नए थाना खोले जाने की घोषणा के मात्र 24 घंटे के भीतर ही अतिक्रमण स्थल पर नई पुलिस चौकी स्थापित की गई। जिसका उद्घाटन बनभूलपुरा हिंसा में घायल महिला कर्मियों द्वारा किया गया। https://t.co/115kb3kn2Z
— Nainital Police Uttarakhand (@nainitalpolice_) February 14, 2024
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದನೆಯನ್ನು ನಾಶಮಾಡಲು ಹೇಗೆ ಪ್ರಯತ್ನ ಮಾಡಬೇಕು ?, ಇದನ್ನು ಉತ್ತರಪ್ರದೇಶ ಮತ್ತು ಅಸ್ಸಾಂ ನಂತರ ಉತ್ತರಾಖಂಡದ ಹೆಸರು ಮುಂದೆ ಬರುತ್ತಿದೆ. ದೇಶಾದ್ಯಂತ ಈ ರೀತಿಯ ಕಾರ್ಯಾಚರಣೆ ನಡೆಸಿದರೆ, ಕೆಲವೇ ಕೆಲಸಮಯದಲ್ಲಿ ‘ಜಿಹಾದಿ ಭಯೋತ್ಪಾದನೆ‘ಯ ಪೂರ್ಣ ನಾಶವಾಗುವುದರಲ್ಲಿ ಸಂಶಯವಿಲ್ಲ ! |
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !