೨೨ ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಹುಡುಗ ಎಂದು ಮೋಸ ಮಾಡಿ ಕಳ್ಳ ನಸೀಫನಿಂದ ಲಕ್ಷಾಂತರ ರೂಪಾಯಿ ಕಬಳಿಸುವ ಪ್ರಯತ್ನ !

  • ಕುಟುಂಬದವರಿಂದ ಲಕ್ಷಾಂತರ ರೂಪಾಯಿ ಕಬಳಿಸುವ ಪ್ರಯತ್ನ ಬಹಿರಂಗ !

  • ಸಾಧುವಿನ ಜೀವನ ನಡೆಸುತ್ತಿರುವುದಾಗಿ ಕುಟುಂಬದವರಿಗೆ ತೋರಿಕೆ !

ಅಮೇಠಿ (ಉತ್ತರಪ್ರದೇಶ) – ಇಲ್ಲಿ ಮುಸಲ್ಮಾನನಿಂದ ಮೋಸ ಹೋಗಿರುವ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಖರೌಲಿ ಗ್ರಾಮದಲ್ಲಿನ ಒಂದು ಕುಟುಂಬಕ್ಕೆ ಅವರ ಕಳೆದೋಗಿರುವ ಹುಡುಗನು ಅರುಣ್ ಇವನು ಸಾಧು ಆಗಿರುವುದು ತಿಳಿಯಿತು. ಇದರ ಕುರಿತು ವಾರ್ತೆಗಳು ಕೂಡ ಪ್ರಸಾರವಾಗಿದ್ದವು. ಈ ಹುಡುಗ ಅರುಣ ಆಗಿರದೆ ನಸೀಫ್ ಇರುವುದು ಮತ್ತು ಕುಟುಂಬದವರಿಂದ ಲಕ್ಷಾಂತರ ರೂಪಾಯಿ ಕಬಳಿಸುವುದಕ್ಕಾಗಿ ಅವನು ಅರುಣ ಎಂದು ಹೇಳಿರುವುದು ತಿಳಿಯಿತು. ದೈನಿಕ ‘ಜಾಗರಣ’ ಮತ್ತು ಸ್ಥಳೀಯ ಯೂಟ್ಯೂಬ್ ಚಾನಲ್ ಇವರ ಸಂಶೋಧನೆಯಿಂದ ಬೆಳಕಿಗೆ ಬಂದಿತು.

೧. ಖರೌಲಿ ಗ್ರಾಮದ ಓರ್ವ ವ್ಯಕ್ತಿಯ ಅರುಣ ಎಂಬ ಹುಡುಗನು ಬಾಲ್ಯದಲ್ಲಿಯೇ ಕಳೆದು ಹೋಗಿದ್ದನು. ತನ್ನ ಹುಡುಗ ಈಗ ಸಾಧುವಾಗಿ ತಿರುಗಾಡುವುದನ್ನು ನೋಡಿ ಅವನಿಗೆ ಅವರು ಮನೆಗೆ ಬರಲು ಹೇಳಿದರು. ಹುಡುಗನು ಸಾಧುವಿನ ಜೀವನ ತ್ಯಜಿಸಿ ಮತ್ತೆ ಕುಟುಂಬದಲ್ಲಿ ಬಾಳಿ ಬದುಕಬೇಕು, ಎಂದು ಕುಟುಂಬದವರು ಪ್ರಯತ್ನಿಸುತ್ತಿದ್ದರು. ಹಾಗೆ ಮಾಡಲು ಸಾಧು ನಿರಾಕರಿಸಿದರು; ಆದರೆ ನಂತರ ಅವರು ಫೋನ್ ಕರೆ ಮಾಡಿ, ನನ್ನನ್ನು ಮತ್ತೆ ಮರಳಿ ಪಡೆಯುವುದಾದರೆ ಮಠಕ್ಕೆ ೧೦ ಲಕ್ಷ ರೂಪಾಯಿ ನೀಡಬೇಕಾಗುತ್ತದೆ.

೨. ಕುಟುಂಬದವರು ತಮ್ಮ ಹುಡುಗ ಮನೆಗೆ ಹಿಂತಿರುಗಬೇಕೆಂದು ಅವರು ತಮ್ಮ ಭೂಮಿಯನ್ನು ಮಾರಿ ಮಗನನ್ನು ಹಿಂತಿರುಗಿ ಪಡೆಯುವ ಸಿದ್ಧತೆ ಆರಂಭಿಸಿದರು. ಈ ಸಂಪೂರ್ಣ ವ್ಯವಹಾರ ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಆಯಿತು; ಆದರೆ ಯಾವ ಮಗನಿಗಾಗಿ ಕುಟುಂಬದವರು ಎಲ್ಲವೂ ಮಾರಲು ಸಿದ್ಧವಾಗಿದ್ದರು ಆ ಹುಡುಗ ಅವರ ಮಗನಲ್ಲದೆ ನಸೀಫ ಎಂದು ಮತ್ತು ಅವನು ಗೊಂಡಾದಲ್ಲಿನ ಟಿಕರಿಯ ಗ್ರಾಮದವನೆಂದು ಬೆಳಕಿಗೆ ಬಂದಿತು.

೩. ನಸೀಫ್ ಯಾವ ಗ್ರಾಮದವನಾಗಿದ್ದನು ಅಲ್ಲಿಯ ಕೆಲವರು ಮೋಸದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ನಸೀಫನ ಸಹೋದರ ರಶೀದ್ ಜುಲೈ ೨೯, ೨೦೨೧ ರಲ್ಲಿ ಮಿರ್ಜಾಪುರದ ಸಹಸ್ಪುರ ಪರಸೋದಾ ಗ್ರಾಮದ ಜೋಗಿ ಎಂದು ತಲುಪಿದ್ದನು. ಅಲ್ಲಿ ಬುದ್ದಿರಾಮ್ ವಿಶ್ವಕರ್ಮ ಇವರ ಪುತ್ರ ರವಿ ಇವನೂ ಕೂಡ ೧೪ ವರ್ಷಗಳಿಂದ ನಾಪತ್ತೆ ಆಗಿದ್ದನು. ಆ ಕುಟುಂಬದವರು ರಶೀದಗೆ ಸ್ವಂತ ಮಗ ರವಿ ಎಂದು ತಿಳಿದು ಮನೆಯಲ್ಲಿ ಸ್ಥಳ ನೀಡಿದ್ದರು. ನಂತರ ಅದೇ ರಶೀದ್ ಲಕ್ಷಾಂತರ ರೂಪಾಯಿ ದೋಚಿ ಪರಾರಿ ಆಗಿದ್ದನು.

೪. ಈ ಸಮಯದಲ್ಲಿ ನಸೀಫನು ಮೋಸ ಮಾಡಲು ಅದೇ ರೀತಿ ಅನುಸರಿಸಿದನು. ಸಾಧುವಿನ ವೇಷದಲ್ಲಿ ಅವನು ಅಮೇಠಿಯ ಖರೌಲಿ ಗ್ರಾಮಕ್ಕೆ ತಲುಪಿದನು ಮತ್ತು ಅವನು ಕಳೆದೋಗಿರುವ ಹುಡುಗನ ಕುಟುಂಬವನ್ನು ಗುರಿ ಮಾಡಿದನು. ಅವನು ಅವರ ಭಾವನೆಗಳನ್ನು ಬಳಸಿ ಅವರನ್ನು ಮೂರ್ಖನನ್ನಾಗಿ ಮಾಡಿದನು. ಜನವರಿ ೨೭ ರಂದು ಖರೌಲಿ ಗ್ರಾಮಕ್ಕೆ ತಲುಪಿ ಅವರು ಜಾರ್ಖಂಡಿನ ಪರಸನಾಥ ಮಠದಲ್ಲಿ ಶಿಕ್ಷಣ ಪಡೆದಿರುವುದಾಗಿ ಹೇಳಿದನು.

ಸಂಪಾದಕೀಯ ನಿಲುವು

ಹಿಂದುಗಳಿಗೆ ಮೋಸ ಮಾಡಲು ಮತಾಂಧ ಮುಸಲ್ಮಾನರು ಅವಲಂಬಿಸಿರುವ ಇನ್ನೊಂದು ಜಿಹಾದ್