‘ಯಾರಾದರೂ ಮಸೀದಿಯನ್ನು ದೇವಸ್ಥಾನವನ್ನಾಗಿ ಮಾಡುತ್ತಿದ್ದರೆ, ನಾವು ಸುಮ್ಮನಿರುವುದಿಲ್ಲ ! (ವಂತೆ) – ಜಮಿಯದ್ ಉಲೇಮಾ-ಏ-ಹಿಂದ್ ನ ಮುಖ್ಯಸ್ಥ ಸಿದ್ಧಿ ಕುಲ್ಲಾಹ ಚೌದರಿ

ಬಂಗಾಳದ ಜಮಿಯದ್ ಉಲೇಮಾ-ಏ-ಹಿಂದ್ ನ ಮುಖ್ಯಸ್ಥ ಸಿದ್ಧಿ ಕುಲ್ಲಾಹ ಚೌದರಿ ಇವರ ಬೆದರಿಕೆ !

ಕೋಲಕಾತಾ (ಬಂಗಾಳ) – ಜ್ಞಾನವಾಪಿಯಲ್ಲಿ ಬಲವಂತವಾಗಿ ಈ ಜನರು(ಹಿಂದೂ ಭಕ್ತರು) ನುಗ್ಗಿ ಅಲ್ಲಿ ಪೂಜೆ ಮಾಡಲು ಆರಂಭಿಸಿದ್ದಾರೆ. ಅವರು ತಕ್ಷಣ ಜ್ಞಾನವಾಪಿಯ ಅಧಿಕಾರ ಬಿಟ್ಟುಕೊಡಬೇಕು. ನಾವು ಎಂದು ಯಾವುದೇ ದೇವಸ್ಥಾನಕ್ಕೆ ನಮಾಜ ಪಠಣೆಗಾಗಿ ಹೋಗಿದ್ದೇವೆಯೆ ? (ನಂಬುವಂತೆ ಸುಳ್ಳು ಹೇಳಬೇಕು, ಇಂತಹ ಪ್ರವೃತ್ತಿಯ ಮತಾಂಧ ಮುಸಲ್ಮಾನರು ! – ಸಂಪಾದಕರು) ಹಾಗಾದರೆ ಈ ಜನರು ನಮ್ಮ ಮಸೀದಿಗೆ ಏಕೆ ಬಂದಿದ್ದಾರೆ ? ಮಸೀದಿ ಇದು ಮಸೀದಿಯೇ ಇರುತ್ತದೆ, ಅದನ್ನು ಯಾರು ದೇವಸ್ಥಾನವನ್ನಾಗಿ ಮಾಡುತ್ತಿದ್ದರೇ ನಾವು ಶಾಂತವಾಗಿ ಇರುವುದಿಲ್ಲ, ನಾವು ಅದನ್ನು ಆಗಲು ಬಿಡುವುದಿಲ್ಲ, ಎಂದು ಜಮೀಯತ್ ಉಲೇಮ ಏ ಹಿಂದ್ ಬಂಗಾಳದ ಮುಖ್ಯಸ್ಥ ಸಿದ್ಧಿ ಕುಲ್ಲಾಹ ಚೌಧರಿ ಇವರು ಬೆದರಿಕೆ ನೀಡಿದ.

ಚೌದರಿ ಇವರ ನೇತೃತ್ವದಲ್ಲಿ ಕೊಲಕಾತಾದಲ್ಲಿ ಪ್ರತಿಭಟನೆ ನಡೆಸುತ್ತಾ ಜ್ಞಾನವಾಪಿಯಲ್ಲಿ ಹಿಂದುಗಳ ಪೂಜೆಗೆ ವಿರೋಧ ವ್ಯಕ್ತಪಡಿಸಿದರು. ‘ಯೋಗಿ ಆದಿತ್ಯನಾಥ್ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ, ಇದರ ಅನುಮಾನ ಅವರಿಗೆ ಇಲ್ಲ. ಅವರು ಇಂದು ಏನಾದರೂ ಬಂಗಾಳದಲ್ಲಿ ಇದ್ದಿದ್ದರೆ ನಾವು ಅವರನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ, ಎಂದು ಈ ಸಮಯದಲ್ಲಿ ಚೌಧರಿ ಇವರು ಬೆದರಿಕೆ ನೀಡಿದರು.

ಸಂಪಾದಕೀಯ ನಿಲುವು

ಇದಕ್ಕೆ ಹೇಳುವುದು ಕಳ್ಳನಿಗೊಂದು ಪಿಳ್ಳೆ ನೆವ ಅಂತ, ಹಿಂದೂಗಳ ದೇವಸ್ಥಾನಗಳನ್ನು ಮಸೀದಿಯನ್ನಾಗಿ ಮಾಡಿರುವವರು ಅವುಗಳನ್ನು ಹಿಂದುಗಳಿಗೆ ಒಪ್ಪಿಸುವ ಬದಲು ‘ಎಲ್ಲವೂ ನಮ್ಮದೇ ಮತ್ತು ನಿಮ್ಮದು ಕೂಡ ನಮ್ಮದೇ’ ಇಂತಹ ಪ್ರವೃತ್ತಿಯ ಮತಾಂಧರು !

ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿಯ ವ್ಯಾಸ ನೆಲೆಮಾಳಿಗೆಯಲ್ಲಿ ಹಿಂದುಗಳಿಂದ ಪೂಜೆಗೆ ಆರಂಭ. ಚೌದರಿ ಈ ರೀತಿಯ ಬೆದರಿಕೆ ನೀಡಿ ನ್ಯಾಯಾಲಯದ ಆದೇಶವನ್ನು ಅವಮಾನಿಸುತ್ತಿದ್ದಾರೆ, ಅವರ ಮೇಲೆ ಕ್ರಮ ಕೈಗೊಳ್ಳಬೇಕು !