ಶ್ರೀನಗರದಲ್ಲಿ ಜಿಹಾದಿ ಉಗ್ರರಿಂದ ಸಿಖ್ ಕಾರ್ಮಿಕನ ಹತ್ಯೆ !

ಹಿಂದೂ ಕಾರ್ಮಿಕನಿಗೆ ಗಾಯ

ಶ್ರೀನಗರ (ಜಮ್ಮು ಕಾಶ್ಮೀರ) – ಇಲ್ಲಿ ಶಲ್ಲಾ ಕಾದಲ್ ಪ್ರದೇಶದಲ್ಲಿ ಫೆಬ್ರವರಿ 7 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಪಂಜಾಬ್‌ನ ಅಮೃತಪಾಲ್ ಸಿಂಗ್ ಎಂಬ ಕಾರ್ಮಿಕನನ್ನು ಹತ್ಯೆ ಮಾಡಿದ್ದಾರೆ. ಮತ್ತು ರೋಹಿತ್ ಹೆಸರಿನ ಇನ್ನೊಬ್ಬ ಕಾರ್ಮಿಕನು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2024 ರಲ್ಲಿ ಉಗ್ರರು ರಾಜ್ಯದ ಹೊರಗಿನ ನಾಗರಿಕರ ಮೇಲೆ ದಾಳಿ ನಡೆಸಿದ ಮೊದಲ ಘಟನೆ ಇದಾಗಿದೆ.

ಸಂಪಾದಕೀಯ ನಿಲುವು

ಕಾಶ್ಮೀರ ಹಿಂದೂ ಮತ್ತು ಸಿಖ್ಕರಿಗೆ ಇನ್ನೂ ಅಸುರಕ್ಷಿತ ಅನಿಸುವುದು ನಾಚಿಕೆಗೇಡಿನ ಸಂಗತಿ !