ಸಾರ್ವತ್ರಿಕ ಚುನಾವಣೆ ಇನ್ನು ೩ ದಿನ ಬಾಕಿ ಇರುವಾಗ ಘಟನೆ !

ಇಸ್ಲಾಮಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ೩ ದಿನಗಳಿದ್ದು, ಅಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ವೇಗ ಪಡೆದಿದೆ. ಅದೇರೀತಿ ದೇಶದಲ್ಲಿ ಉಗ್ರರದಾಳಿಯೂ ಹೆಚ್ಚಿದೆ. ಫೆಬ್ರವರಿ ೫ ರ ಬೆಳಗಿನ ಜಾವ ಕೆಲವು ಜಿಹಾದಿ ಭಯೋತ್ಪಾದಕರು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ ಪಟ್ಟಣದ ಒಂದು ಪೋಲೀಸ್ ಠಾಣೆಯನ್ನು ಗುರಿಯಾಗಿಸಿದರು. ಇದರಲ್ಲಿ ೧೦ ಪೋಲೀಸರು ಹತ್ಯೆಯಾದರು ಹಾಗೂ ೬ ಜನರು ಗಾಯಗೊಂಡರು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಈ ವೇಳೆ ಉಗ್ರರು ಪೋಲೀಸ ಠಾಣೆಗೆ ನುಗ್ಗಿ ಯದ್ವಾತದ್ವಾ ಗುಂಡಿನದಾಳಿ ನಡೆಸಿದ್ದಾರೆ ಎಂದು ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ ೪ ರಂದು ಬಲೂಚಿಸ್ತಾನ್ ಪ್ರಾಂತ್ಯದ ನುಷ್ಕಿ ಜಿಲ್ಲೆಯಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗದ ಕಛೇರಿಯ ಹೊರಗೆ ಬಾಂಬ್ ಸ್ಫೋಟಿಸಿದ್ದಾರೆ. ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನ ವ್ಯವಸ್ಥೆಯು ಈ ದಾಳಿಯಹಿಂದೆ ಭಾರತದ ಹಸ್ತಕ್ಷೇಪವಿದೆ ಎಂದು ಹೇಳಿದರೆ, ಆಶ್ಚರ್ಯ ಪಡಬೇಕಾಗಿಲ್ಲ ! ಏನು ಬಿತ್ತಿದ್ದೇವೆಯೋ ಅದು ಬೆಳೆಯುತ್ತದೆ ಅದೇ ಕಂಠಪ್ರಾಯವಾಗುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಅಂದರೆ ಜಿಹಾದಿನ ಸೃಸ್ಟಿಕರ್ತ ಪಾಕಿಸ್ತಾನ ! |
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’