Tipu Sultan Row : ಸಿರವಾರದಲ್ಲಿ ಅಪರಿಚಿತರಿಂದ ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಲಿಹಾರ ಹಾಕಿದ್ದರಿಂದ ಹಿಂಸಾಚಾರ !

ರಾಯಚೂರು – ರಾಯಚೂರಿನ ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಪ್ರತಿಮೆಗೆ ಜನವರಿ ೩೧ ರಂದು ಅಪರಿಚಿತರು ಚಪ್ಪಲಿಹಾರ ಹಾಕಿದನಂತರ ಹಿಂಸಾಚಾರ ನಡೆದಿದೆ. ಜನರು ಹೆದ್ದಾರಿ ತಡೆದು ರಸ್ತೆಯ ಮೇಲೆ ಟೈರಗಳನ್ನು ಸುಟ್ಟರು. ಹಾಗೆಯೇ ಧ್ವಂಸ ಮಾಡಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಲಾಠಿಪ್ರಹಾರ ಮಾಡಿದರು. ಜನರು ಟಿಪ್ಪು ಸುಲ್ತಾನನ ಪ್ರತಿಮೆಗೆ ಚಪ್ಪಲಿಹಾರ ಹಾಕಿದವನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.