ಜ್ಞಾನವಾಪಿ ಕಾಂಪ್ಲೆಕ್ಸ್ ನ ನೆಲಮಾಳಿಗೆಯ ಬೀಗದ ಕೈ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲು ಕೋರ್ಟ್ ಆದೇಶ !

ವಾರಣಾಸಿ (ಉತ್ತರ ಪ್ರದೇಶ) – ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಕಾಂಪ್ಲೆಕ್ಸ್ ನ ನೆಲಮಾಳಿಗೆಯ ಬೀಗದ ಕೈ ಜಿಲ್ಲಾಧಿಕಾರಿಗೆ ಹಸ್ತಾಂತರಿಸಬೇಕು ಎಂಬ ಆದೇಶ ನೀಡಿದೆ. ಹಿಂದೂ ಪಕ್ಷದ ನ್ಯಾಯವಾದಿ ಮದನ ಮೋಹನ ಯಾದವ್ ಇವರು, ಜಿಲ್ಲಾ ನ್ಯಾಯಾಧೀಶ ಎ. ಕೆ. ವಿಶ್ವೇಶ್ ಇವರು ಅವರ ಆದೇಶದಲ್ಲಿ ಜ್ಞಾನವಾಪಿ ನೆಲಮಾಳಿಗೆಯ ಯೋಗ್ಯ ಕಾಳಜಿ ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಹಿಂದೂ ಪಕ್ಷದ ನ್ಯಾಯವಾದಿ ಮದನ ಮೋಹನ ಯಾದವ್ ಇವರು ಈ ಹಿಂದೆ 1993 ರಲ್ಲಿ ಜ್ಞಾನವಾಪಿಯ ನೆಲಮಾಳಿಗೆಗೆ ಸರಕಾರಿ ಅಧಿಕಾರಿಗಳು ಬೀಗ ಹಾಕಿದ್ದರು ಎಂದು ಹೇಳಿದ್ದರು. ಈ ಹಿಂದೆ ಅರ್ಚಕ ಸೋಮನಾಥ ವ್ಯಾಸ್ ಅವರು ನೆಲಮಾಳಿಗೆಯನ್ನು ಪೂಜೆಗೆ ಬಳಸುತ್ತಿದ್ದರು ಎಂದು ವಕೀಲ ಯಾದವ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದರು.