ದೆಹಲಿಯಲ್ಲಿ ರೈಲು ಹತ್ತುವ ವಿಷಯದ ಜಗಳ: ಪ್ರಯಾಣಿಕನ ಕೊಲೆ

ನವದೆಹಲಿ – ದೆಹಲಿಯ ಶಾಹದರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ ೩ ರ ರಲ್ಲಿ ಜೂನ್ ೨೦ ರ ಬೆಳಗ್ಗೆ ಯೋಗ ಎಕ್ಸ್‌ಪ್ರೆಸ್‌ನ ಸಾಮಾನ್ಯ ದರ್ಜೆಯ (ಜನರಲ್) ಬೋಗಿಗೆ ಹತ್ತುವ ವಿಷಯದಲ್ಲಿ ಪ್ರಯಾಣಿಕರ ನಡುವೆ ಜಗಳ ನಡೆದಿದೆ. ಇದರಲ್ಲಿ ನಡೆದ ಹಲ್ಲೆಯಿಂದಾಗಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾನೆ. ಮೃತ ಪ್ರಯಾಣಿಕನನ್ನು ಪಂಕಜ್ ಧಾಮಾ (ವಯಸ್ಸು ೩೨ ವರ್ಷ) ಎಂದು ಗುರುತಿಸಲಾಗಿದೆ. ಆತ ದೆಹಲಿ ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಪ್ರಯಾಣಿಕರನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಸಮಾಜದಲ್ಲಿ ಸಹಿಷ್ಣುತೆ ಕೊನೆಗೊಳ್ಳುತ್ತಿರುವುದರಿಂದ ವೈಯಕ್ತಿಕ ಕಾರಣಗಳಿಗಾಗಿ ಪರಸ್ಪರರ ಮೇಲೆ ದಾಳಿ ಮಾಡಲಾಗುತ್ತಿದೆ. ಮುಂಬರುವ ಆಪತ್ಕಾಲದಲ್ಲಿ (ಕಷ್ಟಕಾಲದಲ್ಲಿ) ಅನ್ನ-ಧಾನ್ಯ ಮತ್ತು ಇತರ ಸೌಲಭ್ಯಗಳ ಕೊರತೆ ಉಂಟಾದಾಗ ಜನರ ಸ್ಥಿತಿ ಏನಾಗಬಹುದು?, ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ!