ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !

  • ತಮಿಳುನಾಡು: ಜೋಸೆಫ್ ವಿಜಯ್ ಸರಕಾರದ ಅಭಿನಂದನೀಯ ನಿರ್ಧಾರ

  • ದೇವಸ್ಥಾನಗಳ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿ ಖರ್ಚು ಮಾಡುವ ಘೋಷಣೆ !

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸರಕಾರವು ದೇವಸ್ಥಾನಗಳ 46 ಯೋಜನೆಗಳನ್ನು ರದ್ದುಗೊಳಿಸಿದೆ. ಈ ಯೋಜನೆಗಳಿಗೆ ಹಿಂದಿನ ಸ್ಟಾಲಿನ್ ಸರಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು. ದೇವಸ್ಥಾನಗಳ ಸ್ಥಿರ ಮತ್ತು ಚರಾಸ್ತಿಗಳನ್ನು ಕೇವಲ ಧಾರ್ಮಿಕ ಹಾಗೂ ದೇವಸ್ಥಾನಗಳಿಗೆ ಸಂಬಂಧಿಸಿದ ಪವಿತ್ರ ಕಾರ್ಯಗಳಿಗಾಗಿ ಮಾತ್ರ ಬಳಸಲಾಗುವುದೆಂದು ಸರಕಾರ ಹೇಳಿದೆ.

ಸರಕಾರಿ ಆದೇಶದಲ್ಲಿ, ಹಿಂದಿನ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಸರಕಾರವು ದೇವಸ್ಥಾನಗಳ ಹಣದಿಂದ 29 ಕಲ್ಯಾಣ ಮಂಟಪಗಳು ಮತ್ತು 17 ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಅನುಮೋದನೆ ನೀಡಿತ್ತು ಈ ಯೋಜನೆಗಳಿಗೆ ಅಂದಾಜು 246 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು; ಆದರೆ ಈ ಕೆಲಸಗಳು ಇನ್ನೂ ಪ್ರಾರಂಭವಾಗಿರಲಿಲ್ಲ. ಈ ಕಾರಣದಿಂದಲೇ ದೇವಸ್ಥಾನಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಅನುಮೋದನೆಯನ್ನು ರದ್ದುಗೊಳಿಸಲಾಗಿದೆ.

ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಆದಾಯವನ್ನು ಕಲ್ಯಾಣ ಮಂಟಪಗಳನ್ನು ನಿರ್ಮಿಸಲು, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಬಳಸಲಾಗುತ್ತಿತ್ತು; ಆದರೆ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಇದನ್ನು ವಿರೋಧಿಸುತ್ತಿದ್ದವು. ದೇವಸ್ಥಾನಗಳ ಆದಾಯವನ್ನು ಕೇವಲ ದೇವಸ್ಥಾನಗಳ ನಿರ್ವಹಣೆ, ಪೂಜೆ-ಪುನಸ್ಕಾರ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಮಾತ್ರ ಖರ್ಚು ಮಾಡಬೇಕೆಂಬುದು ಹಿಂದೂಗಳ ವಾದವಾಗಿತ್ತು.

ಸಂಪಾದಕೀಯ ನಿಲುವು

ತಮಿಳುನಾಡು ಸರಕಾರದಂತೆ ದೇವಸ್ಥಾನಗಳ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿ ಖರ್ಚು ಮಾಡುವ ನಿರ್ಧಾರವನ್ನು ದೇಶದ ಪ್ರತಿಯೊಂದು ಸರಕಾರವೂ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ! ಹಿಂದುತ್ವನಿಷ್ಠ ಸರಕಾರಗಳು ಮೊದಲು ಈ ಕೆಲಸ ಮಾಡಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !