ಸೋದರ ಸೊಸೆಯನ್ನು ಚುಡಾಯಿಸಿದ್ದಕ್ಕೆ ಆನಂದ ನಾಸಿರನ ಕೆನ್ನೆಗೆ ಬಾರಿಸಿದ ಕಾರಣ ಸಿಟ್ಟಿನಿಂದ ಕೊಲೆ

ಸಂತ ಕಬೀರ ನಗರ (ಉತ್ತರ ಪ್ರದೇಶ) – ಇಲ್ಲಿ ಜೂನ್ 18 ರಂದು ನಾಸಿರ್ ಅಲಿ ಹೆಸರಿನ ವ್ಯಕ್ತಿಯು ಜನನಿಬಿಡ ಮಾರುಕಟ್ಟೆಯಲ್ಲೇ ಆನಂದ ಎಂಬ ಹಿಂದೂ ದಲಿತ ಯುವಕನ ಕತ್ತನ್ನು ಸೀಳಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ನಾಸಿರ್ ಆನಂದನ ಸೋದರ ಸೊಸೆಯನ್ನು ಚುಡಾಯಿಸಿದ್ದಕ್ಕಾಗಿ, ಆನಂದ್ ನಾಸಿರನ ಕೆನ್ನೆಗೆ ಬಾರಿಸಿದ್ದನು. ಇದರ ಸೇಡು ತೀರಿಸಿಕೊಳ್ಳಲು, ತಡರಾತ್ರಿ ಆನಂದ ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದಾಗ ನಾಸಿರ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅವನನ್ನು ಸುತ್ತುವರೆದು ತೀಕ್ಷ್ಣವಾದ ಆಯುಧದಿಂದ ಅವನ ಕುತ್ತಿಗೆಯನ್ನು ಸೀಳಿದ್ದಾನೆ.
ಈ ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಈ ಸಮಯದಲ್ಲಿ ಗ್ರಾಮಸ್ಥರು ನಾಸಿರ್ ನ ಬಂಧನ ಮತ್ತು ಪೊಲೀಸ್ ಎನ್ ಕೌಂಟರ್ನಲ್ಲಿ ಅವನನ್ನು ಕೊಲ್ಲಬೇಕು ಎಂಬ ಬೇಡಿಕೆಗೆ ಪಟ್ಟು ಹಿಡಿದಿದ್ದರು. ಈ ಘಟನೆಯ ನಂತರ ಸಂತ ಕಬೀರನಗರದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಉಪ ಮಹಾನಿರೀಕ್ಷಕರು, ಅಧೀಕ್ಷಕರು ಸೇರಿದಂತೆ ಇಡೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ನಾಸಿರ್ ಮತ್ತು ಅವನ ಸಹಚರರಿಗಾಗಿ ಶೋಧ ನಡೆಸಲಾಗುತ್ತಿದೆ.
ಉಲ್ಲಾಸನಗರದಲ್ಲಿ ಚೈನೀಸ್ ಆಹಾರದಲ್ಲಿ ಮೃತಹಲ್ಲಿ ಪತ್ತೆ!
೬೩ ವರ್ಷದ ಮೌಲ್ವಿಯಿಂದ ೮ ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ
ಕೊಲ್ಹಾಪುರ ಮತ್ತು ಪುಣೆಯಲ್ಲಿ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ !
Yoga Day : ಯೋಗವು ದೇಹವನ್ನು 40 ನೇ ವಯಸ್ಸಿನಲ್ಲಿ 20 ನೇ ವಯಸ್ಸಿಗಿಂತ ಹೆಚ್ಚು ಮೃದುವಾಗಿಸಲು (ಫ್ಲೆಕ್ಸಿಬಲ್) ಸಹಕಾರಿ! – ಪ್ರಧಾನಮಂತ್ರಿ
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !