
ನವ ದೆಹಲಿ – ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯಮಂದಿರ ನಿರ್ಮಾಣವಾಗಬೇಕೆಂದು ವಿಧಿಯ ಇಚ್ಛೆಯಾಗಿದ್ದು; ಅದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ, ಎಂದು ಶ್ರೀರಾಮಜನ್ಮಭೂಮಿಯ ಆಂದೋಲನದಲ್ಲಿಯ ಭಾಜಪದ ಪ್ರಮುಖ ನಾಯಕ ಲಾಲಕೃಷ್ಣ ಅಡ್ವಾಣಿಯವರು ಜನವರಿ ೧೬ ರಂದು ಪ್ರಕಟವಾದ ‘ರಾಷ್ತ್ರಧರ್ಮ‘ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಈ ಹೇಳಿಕೆ ನೀಡಿದ್ದಾರೆ. ‘ರಾಮ ಮಂದಿರ ನಿರ್ಮಾಣ, ಒಂದು ದಿವ್ಯ ಕನಸಿನ ಪೂರ್ಣ(ನನಸು)‘ ಈ ಲೇಖನದ ಹೆಸರಾಗಿದೆ. ೯೬ ವರ್ಷ ಅಡ್ವಾಣಿ ಅವರು ಜನವರಿ ೨೨ ರಂದು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಲಾಲಕೃಷ್ಣ ಆಡ್ವನಿಯವರು, ಸಂಪೂರ್ಣ ರಥಯಾತ್ರೆ ಉದ್ದಕ್ಕೂ ನರೇಂದ್ರಮೋದಿ ನನ್ನ ಜೊತೆಗಿದ್ದರು. ಆ ಸಮಯದಲ್ಲಿ ಅವರು ಹೆಚ್ಚು ಪ್ರಸಿದ್ಧರಾಗಿರಲಿಲ್ಲ; ಆದರೆ ಆ ಸಮಯದಲ್ಲಿ ಪ್ರಭು ಶ್ರೀರಾಮನು ದೇವಾಲಯವನ್ನು ನಿರ್ಮಿಸಲು ತನ್ನ ಭಕ್ತನನ್ನು(ಮೋದಿ)ಆರಿಸಿದನು. ‘ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣವಾಗಬೇಕು‘, ಹೀಗೆಂದು ವಿಧಿ ನಿರ್ಧರಿಸಿದೆ’, ಎಂದು ನನಗೆ ಅರಿವಾಯಿತು. ಮೋದಿಯವರು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಟಾಪಿಸುವರೋ ಆಗ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಪ್ರತಿನಿಧಿಸುತ್ತಾರೆ. ಭಗವಾನ್ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಲು ಈ ದೇವಾಲಯವು ಎಲ್ಲಾ ಭಾರತೀಯರನ್ನು ಸದಾ ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
‘Lord Ram Chose His Devotee To Rebuild Temple’: Advani On PM #Modi Ahead Of #Consecration Event In #Ayodhya#RamTemple #ramtempleconsecration https://t.co/tbUuYRimNQ
— ABP LIVE (@abplive) January 12, 2024
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ