ಅಮೇರಿಕಾದಲ್ಲಿ ಪುನಃ ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ !

ದೇವಸ್ಥಾನಗಳ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆ ಮತ್ತು ಪ್ರಧಾನಮಂತ್ರಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳ ಬರಹ !

ಕ್ಯಾಲಿಫೋರ್ನಿಯಾ (ಅಮೇರಿಕಾ) – ಇಲ್ಲಿನ ಹೇವಾರ್ಡ್ ಪ್ರದೇಶದ ವಿಜಯ ಶೆರಾವಲಿ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಇದಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಷಯದಲ್ಲಿ ಅವಾಚ್ಯ ಪದಗಳನ್ನು ಬರೆದು `ಖಲಿಸ್ತಾನ ಜಿಂದಾಬಾದ’ ಎಂಬ ಘೋಷಣೆಯನ್ನು ಬರೆದಿದ್ದರು. ಹಿಂದೂ ಅಮೇರಿಕನ ಫೌಂಡೇಶನ ಇದರ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

1. ಅಮೇರಿಕದಲ್ಲಿ ನಿರಂತರವಾಗಿ ಹಿಂದೂಗಳ ದೇವಸ್ಥಾನಗಳ ಮೇಲಾಗುವ ಇಂತಹ ದಾಳಿಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗುರುತಿಸಲು ಈ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲು ನಿರಂತರವಾಗಿ ಆಗ್ರಹಿಸಲಾಗುತ್ತದೆ.

2. ಕೆಲವು ದಿನಗಳ ಹಿಂದೆ ಅಮೇರಿಕಾದ ನೆವಾರ್ಕ್ ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ಇದೇ ರೀತಿ ದಾಳಿ ನಡೆದಿತ್ತು, ದುರ್ಗಾ ದೇವಸ್ಥಾನದಲ್ಲಿ ಕಳ್ಳತನದ ಘಟನೆ ನಡೆದಿತ್ತು. ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರೂ ಕೂಡ ನೆವಾರ್ಕ್‌ನ ದೇವಸ್ಥಾನದ ಮೇಲೆ ನಡೆದ ದಾಳಿಯ ಬಗ್ಗೆ ಹೇಳಿಕೆ ನೀಡಿದ್ದರು. ಅವರು ಮಾತನಾಡುತ್ತಾ, ನಾನು ಈ ಸುದ್ದಿಯನ್ನು ನೋಡಿದ್ದೇನೆ. ನಮಗೆ ಈ ಬಗ್ಗೆ ಚಿಂತೆಯಿದೆ. ಭಾರತದ ಹೊರಗಿನ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಶಕ್ತಿಗಳಿಗೆ ಸ್ಥಾನ ಸಿಗಬಾರದು. ನಾವು ಅಮೇರಿಕೆಯ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ

ಸಂಪಾದಕೀಯ ನಿಲುವು

ಖಲಿಸ್ತಾನಿ ಭಯೋತ್ಪಾದಕ ಮತ್ತು ಭಾರತ ವಿರೋಧಿ ಗುರುಪತವಂತ ಸಿಂಹ ಪನ್ನುವಿನ ಮೇಲೆ ಕ್ರಮ ಕೈಕೊಳ್ಳದ ಅಮೇರಿಕದಲ್ಲಿ ಇದಕ್ಕಿಂತ ಬೇರಿನ್ನೇನು ನಡೆಯಲು ಸಾಧ್ಯ? ಇಂತಹ ಘಟನೆಗಳ ಬಗ್ಗೆ ಭಾರತವು ಅಮೇರಿಕೆಗೆ ಸಭ್ಯ ಭಾಷೆಯಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ.