ಜ್ಞಾನವಾಪಿಯ ಸಮೀಕ್ಷೆಯ ವರದಿ ಕುರಿತು ಜನವರಿ 3ರಂದು ವಿಚಾರಣೆ

ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಈ ಹಿಂದೆ ಡಿಸೆಂಬರ್ 21 ರಂದು ವರದಿಯನ್ನು ತೆರೆಯುವ ದಿನಾಂಕವಾಗಿ ನಿಗದಿಪಡಿಸಿತ್ತು; ಆದರೆ, ಡಿಸೆಂಬರ 22ರಂದು ‘ಬಾರ್ ಕೌನ್ಸಿಲ್’ ಚುನಾವಣೆ ಹಿನ್ನೆಲೆಯಲ್ಲಿ ಡಿಸೆಂಬರ 21ರಂದು ಕೆಲಸ ಸ್ಥಗಿತಗೊಳಿಸಲು ವಕೀಲರು ನಿರ್ಧರಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ ಇವರು ಜನವರಿ 3 ರಂದು ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್‌.ಐ.) ಡಿಸೆಂಬರ್ 18 ರಂದು ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಪ್ರದೇಶದ ಸಮೀಕ್ಷೆಯ ಮೊಹರು ವರದಿಯನ್ನು ಸಲ್ಲಿಸಿತ್ತು.