ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಈ ಹಿಂದೆ ಡಿಸೆಂಬರ್ 21 ರಂದು ವರದಿಯನ್ನು ತೆರೆಯುವ ದಿನಾಂಕವಾಗಿ ನಿಗದಿಪಡಿಸಿತ್ತು; ಆದರೆ, ಡಿಸೆಂಬರ 22ರಂದು ‘ಬಾರ್ ಕೌನ್ಸಿಲ್’ ಚುನಾವಣೆ ಹಿನ್ನೆಲೆಯಲ್ಲಿ ಡಿಸೆಂಬರ 21ರಂದು ಕೆಲಸ ಸ್ಥಗಿತಗೊಳಿಸಲು ವಕೀಲರು ನಿರ್ಧರಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ ಇವರು ಜನವರಿ 3 ರಂದು ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್.ಐ.) ಡಿಸೆಂಬರ್ 18 ರಂದು ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಪ್ರದೇಶದ ಸಮೀಕ್ಷೆಯ ಮೊಹರು ವರದಿಯನ್ನು ಸಲ್ಲಿಸಿತ್ತು.
ಜ್ಞಾನವಾಪಿಯ ಸಮೀಕ್ಷೆಯ ವರದಿ ಕುರಿತು ಜನವರಿ 3ರಂದು ವಿಚಾರಣೆ
ಸಂಬಂಧಿತ ಲೇಖನಗಳು
- ಪ್ರಸಾದದ ಪಾವಿತ್ಯ್ರತೆ ಕಾಪಾಡುವುದು ದೇವಸ್ಥಾನದ ಕೆಲಸ, ನನ್ನದಲ್ಲ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ
- ಸರಕಾರ ಕಲಬೆರೆಕೆಯ ತುಪ್ಪ ಪೂರೈಸುವವರನ್ನು ಸುಮ್ಮನೆ ಬಿಡುವುದಿಲ್ಲ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
- ಪ್ರಸಾದದ ಲಡ್ಡು ಈಗ ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರ ! – ತಿರುಮಲ ತಿರುಪತಿ ದೇವಸ್ಥಾನಂ
- Yaduveer Odeyar on Mahish Dasara : ‘ಮಹಿಷಾ ದಸರಾಗೆ ನಮ್ಮ ವಿರೋಧ ಇಲ್ಲವಂತೆ !’ – ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
- ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ
- Gwalior Mid Day Meal MP : ಮಧ್ಯಪ್ರದೇಶ ಸರಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಊಟ; ಆಲೂಗೆಡ್ಡೆಯ ಸಾರಿನಲ್ಲಿ ಆಲೂಗಡ್ಡೆನೇ ಇಲ್ಲ!