ಅಲಹಾಬಾದ್ ಉಚ್ಚನ್ಯಾಯಾಲಯದ ಶ್ರೀ ಕೃಷ್ಣ ಜನ್ಮಭೂಮಿ ಸಮೀಕ್ಷೆಯ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ

ಮಥುರಾ ಈದ್ಗಾ ಸಮಿತಿಯ ಅರ್ಜಿ ತಿರಸ್ಕೃತ !

ಮಥುರಾ (ಉತ್ತರ ಪ್ರದೇಶ) – ಮಥುರಾದಲ್ಲಿರುವ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಈದ್ಗಾ ಮಸೀದಿಯ ಸರ್ವೆ ನಡೆಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಮಥುರಾ ಈದ್ಗಾ ಸಮಿತಿಯು ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿತ್ತು. ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ಈ ಸಂಬಂಧ ಹೈಕೋರ್ಟ್‌ನ ಆದೇಶವನ್ನು ನಮಗೆ ಪ್ರಸ್ತುತ ಪಡಿಸದಿದ್ದರೆ, ನಾವು ಹೇಗೆ ವಿಚಾರಣೆ ನಡೆಸಬಹುದು ? ‘ ಎಂದು ಹೇಳಿತು ಇದಕ್ಕೆ ಸಮಿತಿಯು, ‘ಸರ್ವೆಗೆ ಸಂಬಂಧಿಸಿದಂತೆ ಡಿಸೆಂಬರ್ 18 ರಂದು ವಿಚಾರಣೆ ನಡೆಯಲಿದೆ. ಹಾಗೂ ಕೋರ್ಟ್ ಕಮಿಷನರ್ ನೇಮಕ ಮಾಡಲಾಗುವುದು’, ಇದಕ್ಕೆ ಉಚ್ಚ ನ್ಯಾಯಾಲಯು ನೀಡುವ ಆದೇಶದಿಂದ ನಿಮಗೆ ಏನಾದರೂ ಸಮಸ್ಯೆಯಾದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಕೋರ್ಟ್ ಹೇಳಿದೆ.