ಕೇವಲ ಶೇ. 3 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ !

ನವ ದೆಹಲಿ – ತ್ವರಿತ ಗತಿಯ ವಿಶೇಷ ನ್ಯಾಯಾಲಯಗಳಲ್ಲಿ ಜನವರಿ 2023 ರವರೆಗೆ ಬಾಕಿ ಉಳಿದಿರುವ ಪೊಕ್ಸೊ (ಪ್ರೊಟೆಕ್ಷನ ಆಫ್ ಚಿಲ್ಡ್ರನ್ ಫ್ರಾಮ ಸೆಕ್ಷುಯಲ್ ಆಫೆನ್ಸ ಆಕ್ಟ) ಪ್ರಕರಣಗಳ ‘ಇಂಡಿಯನ್ ಚೈಲ್ಡ್ ಪ್ರಟಿಕ್ಷನ್ ಫಂಡ್’ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ, ದೇಶದಲ್ಲಿ 2 ಲಕ್ಷ 43 ಸಾವಿರ ಪೊಕ್ಸೊ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದೆ. 2022 ರಲ್ಲಿ, ಕೇವಲ ಶೇ.3 ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಒಂದು ವೇಳೆ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿದ್ದರೆ, ಈ ಪ್ರಕರಣಗಳನ್ನು ವಿಲೇವಾರಿ ಮಾಡಲು ನ್ಯಾಯಾಲಯಕ್ಕೆ 9 ವರ್ಷಗಳು ತಗಲಬಹುದು.
ಕಾನೂನು ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಮಾಹಿತಿಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯಲ್ಲಿ, ಜನವರಿ 2023 ರ ವೇಳೆಗೆ 2 ಲಕ್ಷ 68 ಸಾವಿರದ 38 ಪ್ರಕರಣಗಳು ದಾಖಲಾಗಿತ್ತು, ಅದರಲ್ಲಿ 8 ಸಾವಿರ 909 ಪ್ರಕರಣಗಳಲ್ಲಿ ದೋಷಿಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಹೇಳಿದೆ.
ಪೋಕ್ಸೊ ತ್ವರಿತ ಗತಿ ನ್ಯಾಯಾಲಯದಲ್ಲಿ ಪ್ರತಿ ವರ್ಷ ನಿರೀಕ್ಷಿತ 165 ಪ್ರಕರಣಗಳ ಬದಲಾಗಿ ಕೇವಲ 28 ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ !
ಕೇಂದ್ರ ಸರಕಾರವು 2019 ರಿಂದ ತ್ವರಿತ ಗತಿಯ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಿತು. ಈ ನ್ಯಾಯಾಲಯಗಳಿಗಾಗಿ 1 ಸಾವಿರದ 900 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಈ ನ್ಯಾಯಾಲಯಗಳಿಗೆ ಪ್ರತಿ 4 ತಿಂಗಳಿಗೊಮ್ಮೆ 41-42 ಪ್ರಕರಣಗಳನ್ನು ಮತ್ತು ವರ್ಷಕ್ಕೆ 165 ಪ್ರಕರಣಗಳ ವಿಲೇವಾರಿ ಮಾಡುವ ಉದ್ದೇಶವನ್ನು ನೀಡಲಾಗಿತ್ತು; ಆದರೆ ಪ್ರತಿ ವರ್ಷ ಕೇವಲ 28 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿದೆ ಎಂದು ಈ ವರದಿ ಬಹಿರಂಗಪಡಿಸಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಇದರಲ್ಲಿ ಪೊಕ್ಸೊ ಪ್ರಕರಣಗಳ ಪಟ್ಟಿಯನ್ನು ಸಂಕೇತಸ್ಥಳಗಳಲ್ಲಿಡಬೇಕು. ತ್ವರಿತ ಗತಿಯ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸಬೇಕು.
India has 2,43,237 POCSO cases pending in its Fast Track Special Courts (FTSCs) till January 31, 2023, despite Central Government’s robust policy and financial commitment, as per a recent report. https://t.co/u3AvSVjCdS
— The New Indian Express (@NewIndianXpress) December 9, 2023
ಸಂಪಾದಕರ ನಿಲುವು* ತ್ವರಿತ ಗತಿಯ ನ್ಯಾಯಾಲಯಗಳಲ್ಲಿ ಕೇವಲ ಒಂದೇ ಒಂದು ಕಾಯಿದೆಯ ಸಂದರ್ಭದಲ್ಲಿ ಇಷ್ಟೊಂದು ಪ್ರಕರಣಗಳು ಬಾಕಿ ಉಳಿದಿದ್ದರೆ, ಇನ್ನುಳಿದ ಬಾಕಿ ಪ್ರಕರಣಗಳ ಬಗ್ಗೆ ಊಹಿಸಲೂ ಸಾಧ್ಯವಿಲ್ಲ. ತ್ವರಿತ ಗತಿ ನ್ಯಾಯಾಲಯಗಳ ಸ್ಥಿತಿ ಹೀಗಿದ್ದರೆ, ಭಾರತದಲ್ಲಿ ಬೇಗ ನ್ಯಾಯ ಸಿಗುವುದು ಕಷ್ಟವಾಗಿದೆಯೆಂದು ಗಮನಕ್ಕೆ ಬರುತ್ತದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath