ಸೀತಾಪುರ (ಉತ್ತರಪ್ರದೇಶ)ದಲ್ಲಿ ಮಸೀದಿಯ ಮೇಲಿನ ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡದ ಇಬ್ಬರ ವಿರುದ್ಧ ಪ್ರಕರಣ ದಾಖಲು

ದೂರನ್ನು ದಾಖಲಿಸುವುದಷ್ಟೇ ಅಲ್ಲದೇ ಅವರನ್ನು ತಕ್ಷಣ ಜೈಲಿಗೆ ಹಾಕಬೇಕು !

ಸೀತಾಪುರ (ಉತ್ತರ ಪ್ರದೇಶ) – ಮಸೀದಿಯೊಂದರಲ್ಲಿ ಬೊಂಗಾದ ಮಿತಿಗಿಂತ ಹೆಚ್ಚು ಧ್ವನಿ ಇಟ್ಟುಕೊಂಡಿದ್ದಕ್ಕಾಗಿ ಮೌಲ್ವಿ (ಇಸ್ಲಾಮಿಕ್ ಧಾರ್ಮಿಕ ಮುಖಂಡ) ಅಬ್ದುಲ್ಲಾ ಮತ್ತು ಮುತವಲ್ಲಿ (ಮಸೀದಿಯ ನಿರ್ವಹಕ) ಬಬ್ಬು ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಮಸೀದಿಯು ಪೊಲೀಸ್ ಠಾಣೆಯ ಪಕ್ಕದಲ್ಲಿದೆ. ಪೋಲೀಸರು ಧ್ವನಿಯನ್ನು ಕಡಿಮೆ ಮಾಡಲು ಇಬ್ಬರನ್ನು ಹಲವಾರು ಬಾರಿ ಕೇಳಿಕೊಂಡರು; ಆದರೆ ಅವರು ಕೇಳಲಿಲ್ಲ. ಹೀಗಾಗಿ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ನಿಯಮ ಉಲ್ಲಂಘಿಸುವ ಧಾರ್ಮಿಕ ಸ್ಥಳಗಳಲ್ಲಿ ಬೊಂಗಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಂದ ಅಭಿಯಾನ ನಡೆಸಲಾಗುತ್ತಿದೆ.