ಮಮದಾಪುರದಲ್ಲಿ (ಅಹಲ್ಯಾನಗರ) ಗೋರಕ್ಷಕರ ಮೇಲೆ ಮತಾಂಧ ಕಳ್ಳಸಾಗಣಿಕೆದಾರರಿಂದ ಗುಂಡಿನ ದಾಳಿ !


ಶ್ರೀರಾಂಪುರ (ಅಹಲ್ಯಾನಗರ) – ರಾಹತಾ ತಾಲೂಕಿನ ಮಮದಾಪುರದ ಖುರೇಶಿ ಮೊಹಲ್ಲಾ ಪ್ರದೇಶಕ್ಕೆ ಪೊಲೀಸರೊಂದಿಗೆ ತೆರೆಳಿದ್ದ ಗೋರಕ್ಷಕರು ಅಪ್ಪಾಸಾಹೇಬ್ ನಾಯ್ಕವಾಡೆ, ಈಶ್ವರ ತಿಲೇಕರ್ ಮತ್ತು ಸಾಯಿರಾಜ್ ಬೇಂದ್ರೆ ಮೇಲೆ ಗೋಕಳ್ಳಸಾಗಣಿಕೆದಾರರಿಂದ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಆರೋಪಿಗಳು ಡಿಸೆಂಬರ್ 6 ರಂದು ಕೊಡಲಿ ಮತ್ತು ಕತ್ತಿಯಿಂದ ಹಲ್ಲೆ ನಡೆಸಿದ್ದು, ಒಬ್ಬಾತ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪಾಸಾಹೇಬ ನಾಯ್ಕವಾಡೆ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ನಿಯಾಜ್ ಖುರೇಷಿ, ಸದ್ದಾಂ ಖುರೇಷಿ, ಅರ್ಬಾಜ್ ಖುರೇಷಿ ಹಾಗೂ ಅವರ ಸಹಚರರ ವಿರುದ್ಧ ಲೋಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಲೋಣಿ ಪೊಲೀಸ್ ಠಾಣೆಯಲ್ಲಿ ಹಿಂದೂಗಳು ಜಮಾಯಿಸಿ ಆರೋಪಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಸಂಪಾದಕರ ನಿಲುವು

* ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ! ಪ್ರಾಣವನ್ನೇ ಪಣಕ್ಕಿಡುವ ಗೋರಕ್ಷಕರ ರಕ್ಷಣೆಗೆ ಪೊಲೀಸರು ಏನಾದರೂ ಮಾಡುತ್ತಾರೆಯೇ ?