|

ಘಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಗೋವಿಂದಪುರಂನಲ್ಲಿರುವ ಹೋಲಿ ಟ್ರಿನಿಟಿ ಚರ್ಚ್ ಶಾಲೆಯಲ್ಲಿ ಒಬ್ಬ ವಿಧ್ಯಾರ್ಥಿಯು ಬೋರ್ಡ್ ಮೇಲೆ ‘ಜೈ ಶ್ರೀ ರಾಮ್’ ಎಂದು ಬರೆದಿದ್ದರಿಂದ ಶಿಕ್ಷಕಿ ಮನಿಷಾ ಸೆಸಿ ಅವರು ವಿದ್ಯಾರ್ಥಿಯ ಮುಖದ ಮೇಲೆ ಥಿನರ ಸುರಿದಿದ್ದಾರೆ. ಇದರಿಂದ ಮನೆಗೆ ತೆರಳಿದ ವಿದ್ಯಾರ್ಥಿ 45 ನಿಮಿಷಗಳ ಕಾಲ ಕೊಠಡಿಯಲ್ಲಿ ಒಂಟಿಯಾಗಿ ಅಳುತ್ತಿದ್ದ. ಪಾಲಕರಿಗೆ ಈ ವಿಷಯ ತಿಳಿದ ಕೂಡಲೇ ಅವರು ಹಾಗೂ ಬಜರಂಗದಳ ಕಾರ್ಯಕರ್ತರು ಶಾಲೆಗೆ ಆಗಮಿಸಿ ಶಿಕ್ಷಕಿಯನ್ನು ತೆಗೆದುಹಾಕುವಂತೆ ಪ್ರಾಂಶುಪಾಲರಿಗೆ ಒತ್ತಾಯಿಸಿದರು. ಈ ವಿವಾದದ ನಂತರ ಮುಖ್ಯೋಪಾಧ್ಯಾಯಿನಿ ಮಧುಲಿಕಾ ಜೋಸೆಫ್ ಅವರು ಶಿಕ್ಷಕಿ ಮನಿಷಾ ಮೆಸಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ.
1. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಮನಿಷಾ ಮೇಸಿ ಕ್ಷಮಾಪಣೆ ಪತ್ರ ಬರೆದು ಪ್ರಾಂಶುಪಾಲರಿಗೆ ನೀಡಿದ್ದಾರೆ. ಅದರಲ್ಲಿ, ನಾನು ನನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ವಿದ್ಯಾರ್ಥಿ ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ; ಹಾಗಾಗಿ ನಾನು ದ್ರವವನ್ನು ಸುರಿದೆ. ಭವಿಷ್ಯದಲ್ಲಿ ನಾನು ಹೀಗೆ ಮಾಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

2. ಭಜರಂಗದಳದ ಮಹಾನಗರ ಸಂಚಾಲಕ ಗೌರವ ಕುಮಾರ ಸಿಂಗ್ ಅವರು, ‘ಜೈ ಶ್ರೀ ರಾಮ’ ಎಂದು ಹೇಳುವುದು ಅಥವಾ ಬರೆಯುವುದು ಯಾವಾಗಿನಿಂದ ಅಪರಾಧವಾಗಿದೆ ? ಯಾವುದೇ ಶಾಲೆಯಲ್ಲಿ ಇಂತಹ ಮನಸ್ಥಿತಿಯ ಶಿಕ್ಷಕರು ಇದ್ದರೆ ಅದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಚರ್ಚ್ ನ ಶಾಲೆಯಲ್ಲಿ ಇದೇನು ಹೊಸತೇನಿಲ್ಲ. ಅದಕ್ಕಾಗಿಯೇ ಈಗ ಹಿಂದೂಗಳು ಹಿಂದೂಗಳಿಗೆ ಹಿಂದೂ ಧರ್ಮಕ್ಕನುಸಾರ ಶಿಕ್ಷಣವನ್ನು ನೀಡುವ ಶಾಲೆಗಳನ್ನು ಪ್ರಾರಂಭಿಸಬೇಕಾಗಿದೆ ! ಹಿಂದೂ ರಾಷ್ಟ್ರದಲ್ಲಿ ಇಂತಹ ಶಾಲೆಗಳು ಇರುತ್ತವೆ ! |
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!