ಪಾಕಿಸ್ತಾನ ವಿರುದ್ಧ ದಾರಾ ಶಿಕೋಹ ಫೌಂಡೇಶನ ಸಂಸ್ಥೆಯ ವತಿಯಿಂದ ವಿಶ್ವಸಂಸ್ಥೆಗೆ ದೂರು !

ಅಲಿಗಢ (ಉತ್ತರ ಪ್ರದೇಶ) – ಇಲ್ಲಿಯ ‘ದಾರಾ ಶಿಕೋಹ ಫೌಂಡೇಶನ ಹೆಸರಿನ ಇಸ್ಲಾಮಿಕ್ ಸಂಸ್ಥೆಯು ಪಾಕಿಸ್ತಾನ ಸರಕಾರದ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದೆ. ಸಂಸ್ಥೆಯು ಯುನೆಸ್ಕೊ ಅಂದರೆ ವಿಶ್ವಸಂಸ್ಥೆಯು ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಗೆ ಬರೆದಿರುವ ಪತ್ರದಲ್ಲಿ ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದಲ್ಲಿರುವ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸುವುದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದೆ. ಹಾಗೆಯೇ ಈ ದೇವಸ್ಥಾನಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಪಾಕಿಸ್ತಾನ ಸರಕಾರದಿಂದ ಹಿಂಪಡೆದುಕೊಳ್ಳಬೇಕು ಎಂದು ಸಂಸ್ಥೆಯು ಆಗ್ರಹಿಸಿದೆ. ಫೌಂಡೇಶನ ಅಧ್ಯಕ್ಷ ಮಹಮ್ಮದ ಅಮೀರ ರಶೀದ ಅವರು ಈ ಪತ್ರ ಬರೆದಿದ್ದು, ಅದರಲ್ಲಿ 26/11 ರಂದು ಭಾರತೀಯರ ಮತ್ತು ಮುಖ್ಯವಾಗಿ ಹಿಂದೂಗಳ ಭಾವನೆಗಳನ್ನು ನೋಯಿಸಲು ಪಾಕಿಸ್ಥಾನ ಸರಕಾರವು ಶಾರದಾ ಪೀಠದ ಗೋಡೆಯನ್ನು ನ್ಯಾಯಾಲಯದ ಯಾವುದೇ ಆದೇಶವಿಲ್ಲದಿರುವಾಗಲೂ ಕೆಡವಿತು ಎಂದು ಹೇಳಿದೆ.
‘ದಾರಾ ಶಿಕೋಹ ಫೌಂಡೇಶನ’ ತನ್ನ ಪತ್ರದಲ್ಲಿ….
1. ಪಾಕಿಸ್ತಾನ ಸರಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡುತ್ತಿವೆ. ಪಾಕಿಸ್ತಾನಿ ಸೈನಿಕರಿಗಾಗಿ ಅಲ್ಲಿ ಕಾಫಿ ಹೌಸ್ ನಿರ್ಮಿಸಬೇಕೆಂದು ಅವರು ಹಿಂದೆ ಮುಂದೆ ಆಲೋಚನೆ ಮಾಡದೆ ಶಾರದಾ ಪೀಠದ ಗೋಡೆಯನ್ನು ಕೆಡವಿದರು.
2. ಪಾಕಿಸ್ತಾನದ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠದಲ್ಲಿ ಹಿಂದೂ ದೇವಸ್ಥಾನದ ಬಾಕಿ ಉಳಿದಿರುವ ಅವಶೇಷಗಳಿವೆ. ಹಾಗೆಯೇ ಇದು ಪ್ರಾಚೀನ ಶಿಕ್ಷಣ ಕೇಂದ್ರವಾಗಿದೆ.
3. ಯುನೆಸ್ಕೋದ ಮಹಾನಿರ್ದೇಶಕರು ಪಾಕಿಸ್ತಾನ ಸರಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
4. ಯುನೆಸ್ಕೋ ಮುಖಂಡತ್ವದಲ್ಲಿ ಶಾರದಾ ಪೀಠದ ಪುನಶ್ವೇತನ ಮತ್ತು ಪುನರುದ್ಧಾರವಾಗಬೇಕು.
5. ಅದೇ ರೀತಿ ಪಾಕಿಸ್ತಾನ ಸರಕಾರ ಆಕ್ರಮಿಸಿರುವ ಕಾಶ್ಮೀರದಲ್ಲಿರುವ ಹಿಂಗಲಾಜಮಾತಾ ದೇವಸ್ಥಾನವನ್ನೂ ಕೆಡವಿದೆ. ಕಳೆದ 3-4 ವಾರಗಳಲ್ಲಿ ಸರಕಾರಿ ಆದೇಶದ ಅಡಿಯಲ್ಲಿ ಈ ರೀತಿ ಅನೇಕ ದೇವಸ್ಥಾನಗಳನ್ನು ಕೆಡವಲಾಗಿದೆ.
6. ಇದು ಪಾಕಿಸ್ತಾನ ಸರಕಾರದ ಅಸಹಿಷ್ಣುತೆಯ ಒಂದು ಉದಾಹರಣೆಯಾಗಿದೆಯಷ್ಟೆ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !