ಕೇರಳದ ಘಟನೆ !

ತಿರುವನಂತಪುರಂ (ಕೇರಳ) – ಇಲ್ಲಿಯ ತ್ವರಿತ ನ್ಯಾಯಾಲಯವು ಪ್ರಿಯತಮನಿಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ನಡೆಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ 20 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಮಾರ್ಚ್ 2018 ರಿಂದ ಸೆಪ್ಟೆಂಬರ್ 2019 ರ ನಡುವೆ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಈ ಮಹಿಳೆಯ ಪತಿ ಮಾನಸಿಕವಾಗಿ ಅಸ್ಥಿರವಾಗಿದ್ದಾನೆ. ಹಾಗಾಗಿ ಈ ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿರಲಿಲ್ಲ. ಆ ಬಳಿಕ ಈ ಮಹಿಳೆಯು ಶಿಶುಪಾಲನ ಹೆಸರಿನ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಈತನೇ ಈ ಮಹಿಳೆಯ ಮಗಳ ಮೇಲೆ ಬಲಾತ್ಕಾರ ಮಾಡಿದ್ದನು.
1. ನ್ಯಾಯಮೂರ್ತಿ ಅರ್. ರೇಖಾ ಇವರು ತೀರ್ಪು ನೀಡುವಾಗ, ಈ ಪ್ರಕರಣದಲ್ಲಿ ತಾಯಿಗೆ ಶಿಕ್ಷೆಯಾಗಿದೆ; ಏಕೆಂದರೆ ವಿಚಾರಣೆ ನಡೆಯುತ್ತಿರುವಾಗಲೇ ಪ್ರಮುಖ ಆರೋಪಿ ಅಂದರೆ ಈ ಮಹಿಳೆಯ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತ್ರಸ್ತೆ ಬಾಲಕಿಯ ಬಾಲ್ಯವನ್ನು ಅವಳ ತಾಯಿಯೇ ಹೊಸಕಿ ಹಾಕಿದ್ದಳು. ತನ್ನ ಪುಟ್ಟ ಹುಡುಗಿಯನ್ನು ರಕ್ಷಿಸುವ ಜವಾಬ್ದಾರಿ ಆಕೆಯ ತಾಯಿಯದಾಗಿತ್ತು; ಆದರೆ ಈ ತಾಯಿಯು ಪ್ರಿಯತಮೆಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ಮಾಡಲು ಒಪ್ಪಿಗೆ ನೀಡಿದಳು.
2. ಪೊಲೀಸರು ನೀಡಿರುವ ಮಾಹಿತಿಯನುಸಾರ, ಸಂತ್ರಸ್ತೆಯ 11 ವರ್ಷದ ಮಲತಂಗಿ ಕೂಡ ಶೋಷಣೆಗೆ ಒಳಗಾಗಿದ್ದಾಳೆ. ಸಂತ್ರಸ್ತೆ ಮತ್ತು ಆಕೆಯ 11 ವರ್ಷದ ಸಹೋದರಿಗೆ ಶಾಂತವಾಗಿರುವಂತೆ ಬೆದರಿಕೆ ಹಾಕಲಾಗಿತ್ತು. ಈ ಇಬ್ಬರೂ ಬಾಲಕಿಯರು ಅಜ್ಜಿ ಮನೆಗೆ ಓಡಿ ಹೋದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
Kerala woman jailed for 40 years for letting lover rape her minor daughter
A woman in Kerala was sentenced to 40 years imprisonment and a fine of Rs 20,000, for helping her live-in partner rape her daughter, who was then seven years old.
(@KGShibimol)https://t.co/dmdfNyOLaQ
— Law Today (@LawTodayLive) November 28, 2023
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath