ಪಾಕಿಸ್ತಾನ ಸರಕಾರದಿಂದ ಸಿಂಧಪ್ರಾಂತದಲ್ಲಿನ ಶ್ರೀಹಿಂಗಲಾಜಮಾತಾ ದೇವಸ್ಥಾನ ನೆಲಸಮ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧಪ್ರಾಂತದಲ್ಲಿನ ಥಾರಪಾರಕರ ಜಿಲ್ಲೆಯಲ್ಲಿನ ಮೀಠಿ ಪ್ರದೇಶದಲ್ಲಿನ ಶ್ರೀ ಹಿಂಗಲಾಜಮಾತಾ ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದ ಹಿಂದೂ ಧರ್ಮದ ಮಾಜಿ ಕ್ರಿಕೆಟ ಪಟು ದಾನಿಶ ಕನೆರಿಯಾ ಇವರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದರು. ಅವರು ಈ ಘಟನೆಯ ವಿಡಿಯೋ ಪ್ರಸಾರ ಮಾಡುತ್ತಾ, ಅತಿಕ್ರಮಣದ ಆರೋಪ ಮಾಡುತ್ತಾ ಈ ದೇವಸ್ಥಾನ ನೆಲಸಮ ಮಾಡಲಾಗಿದೆ.

ದಾನಿಶ ಕನೆರಿಯಾ ಇವರು ಮಾತು ಮುಂದುವರಿಸಿ, ಪಾಕಿಸ್ತಾನಿ ಅಧಿಕಾರಿಗಳು ಹಿಂದುಗಳ ಧಾರ್ಮಿಕ ಸ್ಥಳಗಳ ಮೇಲೆ ಕ್ರಮ ಕೈಗೊಳ್ಳುವುದು ನಡೆಯುತ್ತಲೇ ಇದೆ. ಮಿರಪುರಖಾಸದ ಅತಿಕ್ರಮಣ ವಿರೋಧಿ ತಂಡದಿಂದ ನ್ಯಾಯಾಲಯದ ಆದೇಶದ ನಂತರ ಶ್ರೀ ಹಿಂಗಲಾಜಮಾತಾ ದೇವಸ್ಥಾನ ಧ್ವಂಸಗೊಳಿಸಿದ್ದಾರೆ. ದಾನಿಶ ಕನೆರಿಯ ಇವರು ಕಳೆದ ವರ್ಷ ಕೂಡ ಕರಾಚಿಯಲ್ಲಿ ಒಂದು ಹಿಂದೂ ದೇವಸ್ಥಾನದ ಮೇಲೆ ನಡೆದಿರುವ ದಾಳಿಯ ಮಾಹಿತಿ ನೀಡಿದ್ದರು.

(ಸೌಜನ್ಯ : Republic World)

ಸಂಪಾದಕರ ನಿಲುವು

ಸರಕಾರ ಎಂದಾದರು ಭಾರತದಲ್ಲಿನ ಯಾವುದಾದರೂ ಕಾನೂನ ಬಾಹಿರವಾಗಿರುವ ಮಸೀದಿಯ ಕುರಿತು ಈ ರೀತಿ ಮಾಡುವ ಧೈರ್ಯ ತೋರಿಸಬಹುದೇ ?