ಏಕಾದಶಿಯ ಮಹಾತ್ಮೆ

ನವೆಂಬರ್‌ ೨೩ ರಂದು ಕಾರ್ತಿಕ ಏಕಾದಶಿ ಇದೆ. ಅದರ ಪ್ರಯುಕ್ತ

೧. ಆಷಾಢ ಮತ್ತು ಕಾರ್ತಿಕ ಮಾಸದಲ್ಲಿನ ಏಕಾದಶಿಯ ಮಹತ್ವ

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

ಯಾವುದಾದರೂ ವಿಶಿಷ್ಟ ವಾರದಂದು, ತಿಥಿಯಂದು ಅಥವಾ ಯಾವುದಾದರೂ ತಿಂಗಳಲ್ಲಿ ವಿಶಿಷ್ಟ ದೇವತೆಗಳ ಸ್ಪಂದನಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಆ ಸಮಯವನ್ನು ಆಯಾ ದೇವತೆಯ ಸಮಯ ಎಂದು ತಿಳಿಯಲಾಗುತ್ತದೆ. ಇಡೀ ವರ್ಷದಲ್ಲಿ ೨೪ ಬಾರಿ ಬರುವ ಏಕಾದಶಿಯ ತುಲನೆಯಲ್ಲಿ ಆಷಾಢ ಮತ್ತು ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಸಮಯದಲ್ಲಿ ಶ್ರೀವಿಷ್ಣುವಿನ ತತ್ತ್ವವು ಪೃಥ್ವಿಯಲ್ಲಿ ಅಧಿಕಪ್ರಮಾಣದಲ್ಲಿ ಬರುವುದರಿಂದ ಶ್ರೀವಿಷ್ಣುವಿಗೆ
ಸಂಬಂಧಿತ ಈ ಎರಡು ಏಕಾದಶಿಯ ಮಹತ್ವ ಹೆಚ್ಚು ಇದೆ.

೨. ಏಕಾದಶಿಯಲ್ಲಿನ ಹನ್ನೊಂದು (೧೧) ಈ ಸಂಖ್ಯೆಯ ವರ್ಣನೆ

ಅ. ಹನ್ನೊಂದರ ಪೂಜಾ ಸ್ಥಾನದ ಎಂದರೆ ಎಲ್ಲಾ ಭೂತಗಳ (ಜೀವಿ) ಪೂಜೆ ಮಾಡಬೇಕು, ಹೀಗೆ ಸ್ವತಃ ಏಕನಾಥ ಮಹಾರಾಜರು ಹೇಳಿದ್ದಾರೆ. ಒಂದನೆಯದು ೧ ಇದು ಪೂಜ್ಯ (ಭಗವಂತ, ಪರಮಾತ್ಮ) ಮತ್ತು ಎರಡನೆಯ ೨ ಇದು ಪೂಜಕ (ಆತ್ಮ) ಆಗಿದೆ. ಪೂಜ್ಯ ಮತ್ತು ಪೂಜಕ ಇವರಿಬ್ಬರೂ ಒಂದೇ (೧) ಆಗಿದ್ದಾರೆ ಎಂದರೆ ಏಕರೂಪವಾಗಿದ್ದಾರೆ. ೧೧ ಈ ಸಂಖ್ಯೆಯು ೧೦ ಇಂದ್ರಿಯಗಳು ಮತ್ತು ೧ ಮನಸ್ಸು ಸೇರಿ ದೇಹದಲ್ಲಿನ ಅರಿವಿನ ಪ್ರತೀಕವಾಗಿದೆ. ಈ ಅರಿವು ಎಲ್ಲಾ ಜೀವಿಗಳಲ್ಲಿ ಇರುತ್ತದೆ; ಆದ್ದರಿಂದ ಎಲ್ಲಾ ಜೀವಿಗಳ ಪೂಜೆ ಆಗುತ್ತದೆ. ಯಾರು ಸ್ವಂತದ ಎಲ್ಲಾ ಭೋಗಗಳನ್ನು ಭಗವಂತನಿಗೆ ಅರ್ಪಿಸುವ ಭಾವನೆಯನ್ನು ಇಟ್ಟುಕೊಳ್ಳುತ್ತಾನೆಯೋ ಅವನಿಗೆ ಆತ್ಮತತ್ತ್ವದ ಅರಿವಾಗುತ್ತದೆ. ಅದು ಎಲ್ಲಾ ಕಡೆಗೆ ಸಮತ್ವದಿಂದಿದೆ.
(ಆಧಾರ : ಸಾರ್ಥ ಶ್ರೀ ಏಕನಾಥಿ ಭಾಗವತ ಅಧ್ಯಾಯ ೧೧, ಶ್ಲೋಕ ೧೪೪೭ ರಿಂದ ೧೪೪೯)

ಆ. ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿ ಈ ತಿಥಿಗಳಂದು ಪಂಢರಪುರದ ಯಾತ್ರೆ ಇರುತ್ತದೆ. ಪಾಂಡುರಂಗನ ದರ್ಶನಕ್ಕಾಗಿ ವಾರಕರಿಗಳು ಏಕಾದಶಿ ಮಾಡುವುದು (ಒಂದು + ಹತ್ತು) ಎಂದರೆ ಒಂದು ಮನಸ್ಸು ಮತ್ತು ೧೦ ಇಂದ್ರಿಯಗಳು ಪಾಂಡುರಂಗನಿಗೆ ಸಂಪೂರ್ಣವಾಗಿ ಸಮರ್ಪಿಸುವುದು. ಪಾಂಡುರಂಗನ ಸೆಳೆತದಿಂದ ಈ ವಾರಿ (ಯಾತ್ರೆ) ನಿಯಮಿತವಾಗಿ ಪ್ರತಿ ವರ್ಷ ಮಾಡುವವನೇ ವಾರಕರಿ !

ಸಂಕಲನಕಾರರು : ಪರಾತ್ಪರ ಗುರು (ದಿ.) ಪರಶರಾಮ ಮಾಧವ ಪಾಂಡೆ ಮಹಾರಾಜರು (ಆಧಾರ : ಸನಾತನದ ಮರಾಠಿ ಗ್ರಂಥ ಪಂಢÀರಿಯ ಮೊದಲ ವಾರಕರಿ (ಪಾಂಡುರಂಗ))