ಇಸ್ರೇಲ್ ನ ಪ್ರಧಾನ ಮಂತ್ರಿ ನೆತಾನ್ಯಾಹೂ ಇವರನ್ನು ಗುಂಡು ಹಾರಿಸಿ ಕೊಲ್ಲಬೇಕಂತೆ ! -ಕೇರಳದ ಕಾಂಗ್ರೆಸ್ ಶಾಸಕ ರಾಜಮೋಹನ ಉನ್ನೀಥನ್ ! 

ಕೇರಳದ ಕಾಂಗ್ರೆಸ್ ಶಾಸಕ ರಾಜಮೋಹನ ಉನ್ನೀಥನ್

ತಿರುವನಂತಪುರಂ (ಕೇರಳ) – ಕೇರಳದ ಕಾಸರಗೋಡದಲ್ಲಿನ ಕಾಂಗ್ರೆಸ್ ನ ಶಾಸಕ ರಾಜಮೋಹನ ಉನ್ನಿಥನ್ ಇವರು ನವೆಂಬರ್ ೧೭ ರಂದು ಪ್ಯಾಲೆಸ್ಟೈನ್ ಬೆಂಬಲಿಸಿ ನಡೆಸಲಾದ ಮೆರವಣಿಗೆಯ ಸಮಯದಲ್ಲಿ ಮಾಡಿದ ಭಾಷಣದಲ್ಲಿ ‘ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹೂ ಇವರನ್ನು ಯಾವುದೇ ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಬೇಕು’, ಎಂದು ಹೇಳಿಕೆ ನೀಡಿದರು. ಆ ಸಮಯದಲ್ಲಿ ಅವರು ನಾಜಿ ಮೇಲೆ ನಡೆಸಲಾಗಿರುವ ‘ನೂರ್ಹಮಬಗ್ (ಜರ್ಮನಿಯಲ್ಲಿನ ಒಂದು ನಗರ) ಮಾಡೇಲ್’ಅನ್ನು ಬೆಂಬಲಿಸಿದರು.

(ಸೌಜನ್ಯ – SO SOUTH)

ಶಾಸಕ ರಾಜಮೋಹನ್ ಇವರು, ಎರಡನೇ ಮಹಾಯುದ್ಧದ ನಂತರ ಯುದ್ಧ ಅಪರಾಧಿಗಳಿಗೆ ಅಂದರೆ ನಾಝಿನ ನ್ಯಾಯದ ಕಕ್ಷೆಗೆ ತರುವುದಕ್ಕೆ ‘ನೂರ್ಹಮಬಗ ಟೆಸ್ಟ್’ ಹಾಗೆ ವಿಷಯವಿತ್ತು. ಅದರ ಪ್ರಕಾರ ಆರೋಪಿಯನ್ನು ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈಗ ಅದೇ ಸಮಯ ಬಂದಿದೆ. ಇದೇ ಭೂಮಿಯಲ್ಲಿ ಇಸ್ರೇಲಿನ ಪ್ರಧಾನಮಂತ್ರಿ ನೇತಾನ್ಯಾಹೂ ಇವರಿಗೂ ಕೂಡ ‘ನೂರ್ಹಮಬಗ’ ಜಾರಿಗೊಳಿಸಬೇಕು. ಈಗ ಅವರು ಯುದ್ಧ ಅಪರಾಧಿ ಎಂದು ಜಗತ್ತಿಗೆ ಎದುರು ನಿಂತಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯ ಹೇಳಿಕೆ ಯಾವುದಾದರೂ ಹಿಂದುತ್ವನಿಷ್ಠ ಸಂಘಟನೆಯ ನಾಯಕರು ದೇಶದ್ರೋಹಯ ಬಗ್ಗೆ ಅಥವಾ ಹಮಾಸ್ ನ ಭಯೋತ್ಪಾದಕರ ಬಗ್ಗೆ ತಪ್ಪಿಯಾದರೂ ಹೇಳಿದರೆ ಎಲ್ಲಾ ಜಾತ್ಯಾತೀತರು, ಪ್ರಗತಿ (ಅಧೋ) ಪರರು ಅವರ ಮೇಲೆ ಮುಗಿ ಬೀಳುತ್ತಿದ್ದರು. ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳಲು ಸರಕಾರವನ್ನು ಅನಿವಾರ್ಯಗೊಳಿಸುತ್ತಿದ್ದರು; ಆದರೆ ಈಗ ಕಾಂಗ್ರೆಸ್ ನ ಶಾಸಕರಿಂದ ಈ ರೀತಿ ಹೇಳಿಕೆ ಬಂದಿರುವುದರಿಂದ ಎಲ್ಲವೂ ಶಾಂತವಾಗಿಯೇ ಇದೆ !

ಜಿಹಾದಿ ಭಯೋತ್ಪಾದಕ ಹಮಾಸಗೆ ಏನು ಅನಿಸುತ್ತಿದೆ, ಅದೇ ಕಾಂಗ್ರೆಸ್ ನ ಶಾಸಕರಿಗೆ ಅನಿಸುತ್ತಿದೆ, ಇದರಿಂದ ಇಬ್ಬರ ಮಾನಸಿಕತೆ ಒಂದೇ ಆಗಿದೆ, ಹೀಗೆ ಹೇಳಿದರೆ ತಪ್ಪಾಗಲಾರದು.