ಬಂಧಿತ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದ ಮಾಹಿತಿ !

ಅಲಿಗಡ್ (ಉತ್ತರಪ್ರದೇಶ) – ಇಲ್ಲಿ ಬಂಧಿತ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಅಬ್ದುಲ್ ಅರ್ಸಲಾನ್ ಮತ್ತು ಮಾಜ್ ಬಿನ್ ತಾರಿಕ್ ಇವರ ವಿಚಾರಣೆಯಲ್ಲಿ ರಾಜ್ಯದಲ್ಲಿನ ಗಾಜಿಯಬಾದದ ಮಹಂತ ಯತಿ ನರಸಿಂಹನಂದ ಸರಸ್ವತಿ ಸಹಿತ ಹಿಂದುತ್ವನಿಷ್ಠ ನಾಯಕರನ್ನು ಕೊಲ್ಲುವ ಸಿದ್ಧತೆಗಳು ನಡೆಸುತ್ತಿದ್ದರು. ಅಬ್ದುಲ್ಲಾ ಅರ್ಸಲಾನ ಇವನು ಬಾಂಬ್ ಸ್ಪೋಟ ನಡೆಸಿ ಮಹಂತ ಯತಿ ನರಸಿಂಹನಂದ ಇವರ ಹತ್ಯೆ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದನು. ಅರ್ಸಲಾನ್ ಪೆಟ್ರೋಕೆಮಿಕಲ್ ಇಂಜಿನಿಯರ್ ಆಗಿದ್ದಾನೆ. ಅವನು ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಬಿ.ಟೆಕ್. ಪದವಿ ಪಡೆದಿದ್ದಾನೆ. (‘ಆಶಿಕ್ಷಿತ ಮುಸಲ್ಮಾನ ಯುವಕರು ಜಿಹಾದಿ ಭಯೋತ್ಪಾದಕರಾಗುತ್ತಾರೆ’, ಎಂದು ಹೇಳುವವರು ಇದರ ಬಗ್ಗೆ ಏನಾದರೂ ಹೇಳುವರೆ ? ‘ಮುಸಲ್ಮಾನರು ಧರ್ಮಕ್ಕಾಗಿ ಭಯೋತ್ಪಾದಕರಾಗುತ್ತಾರೆ’, ಇದೇ ಸತ್ಯ: ಆದರೆ ಡೋಂಗಿ ಜಾತ್ಯತೀತರು ಉದ್ದೇಶಪೂರ್ವಕವಾಗಿ ದೇಶದ ದಾರಿ ತಪ್ಪಿಸುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು) ಅಬ್ದುಲ್ಲಾ ಅರ್ಸಲಾನ್ ಮತ್ತು ಮಾಜ ಬಿನ್ ತಾರಿಕ್ ಇವರ ಜೊತೆಗೆ ವಜಿಉದ್ದಿನ್ ಇವನು ಡಾಸನಾಗೆ ಹೋಗಿ ಶಿವಶಕ್ತಿ ಧಾಮದ ಮಾಹಿತಿ ಸಂಗ್ರಹಿಸಿದ್ದನು. ವಜಿಉದ್ದಿನ್ ಇವನನ್ನು ಛತ್ತಿಸಗಡದಲ್ಲಿ ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕರು ಹಿಂದೂಗಳ ನಾಯಕರು ಮತ್ತು ಸಂತರನ್ನು ಗುರಿ ಮಾಡುತ್ತಿರುವುದು ಹೊಸದೇನಲ್ಲ. ಆದ್ದರಿಂದ ಈ ಭಯೋತ್ಪಾದನೆ ಎಂದರೆ ಧರ್ಮ ಯುದ್ಧವೇ ಆಗಿದೆ. ಇದನ್ನು ಬೇರು ಸಹಿತ ಕಿತ್ತು ಎಸೆಯುವುದಕ್ಕೆ ಜಿಹಾದಿ ಮಾನಸಿಕತೆಯನ್ನು ನಾಶ ಮಾಡುವ ಪ್ರಯತ್ನ ಆಗಬೇಕು ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ