ರಾಮನಾಥಿ (ಫೋಂಡಾ, ಗೋವಾ) – ನವರಾತ್ರ್ಯುತ್ಸವದ ನಿಮಿತ್ತ ಇಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ೧೫ ರಿಂದ ೨೪ ಅಕ್ಟೋಬರ್ ೨೦೨೩ ರ ಕಾಲಾವಧಿಯಲ್ಲಿ ‘ದಶಮಹಾವಿದ್ಯಾಯಾಗ’ ನೆರವೇರಿತು. ‘ಸನಾತನ ಧರ್ಮ ಸಂಸ್ಥಾಪನೆಯು ಆದಷ್ಟು ಬೇಗ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ತಪ್ಪಿ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯವು ಲಭಿಸಬೇಕು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗ ಬೇಕು’, ಎಂಬ ಉದ್ದೇಶದಿಂದ ಈ ಯಾಗವನ್ನು ಮಾಡಲಾಯಿತು. ಈ ಯಾಗದಲ್ಲಿ ಕರುಂಗಾಳಿ ಚೂರ್ಣ ಮತ್ತು ಮೂಲಿಕಾ ಚೂರ್ಣದ ಹವನ ಮಾಡಲಾಯಿತು. ಈ ಯಾಗಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ಯಾಗದ ನಂತರ ಪ್ರತಿದಿನ ಗಾಯನ ಸೇವೆಯನ್ನು ಪ್ರಸ್ತುತ ಪಡಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರನ್ನು ಮತ್ತು ಸಾಧಕಿಯರನ್ನು ಆಹ್ವಾನಿಸಲಾಗಿತ್ತು. ಅದಕ್ಕನುಸಾರ ವಿಶ್ವವಿದ್ಯಾಲಯದ ಸಾಧಕರು ಮತ್ತು ಸಾಧಕಿಯರು ದೇವಿಯ ಆರತಿ, ಭಕ್ತಿಗೀತೆ ಮುಂತಾದ ವಿವಿಧ ಪ್ರಕಾರಗಳಲ್ಲಿನ ಗಾಯನಸೇವೆಯನ್ನು ಪ್ರಸ್ತುತಪಡಿಸಿದರು.
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ನವರಾತ್ರಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆರವೇರಿದ ‘ದಶಮಹಾವಿದ್ಯಾ ಯಾಗ’ !
ನವರಾತ್ರಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆರವೇರಿದ ‘ದಶಮಹಾವಿದ್ಯಾ ಯಾಗ’ !
ಸಂಬಂಧಿತ ಲೇಖನಗಳು
- ಇಂದೋರ (ಮಧ್ಯಪ್ರದೇಶ)ಇಲ್ಲಿನ ಉದ್ಯಮಿ ಅಭಯ ನಿಗಮ ಇವರ ಗೋವಾದ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ !
- Supreme Court Advocate Visited Ramanathi: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯವು ಸ್ಪೂರ್ತಿದಾಯಕ ! – ನ್ಯಾಯವಾದಿ ಉಪಾಧ್ಯಾಯ
- ಪ.ಪೂ. ಸದ್ಗುರು ಋಷಿದೇವ ನರೇಂದ್ರಜಿ ಇವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿ
- ರಾಮರಾಜ್ಯದ (ಹಿಂದೂ ರಾಷ್ಟ್ರದ) ಪ್ರತಿಕೃತಿ ಆಗಿರುವ ಸನಾತನದ ಆಶ್ರಮ !
- ಸನಾತನ ಸಂಸ್ಥೆ, ಎಂದರೆ ಸಾಧಕನನ್ನು ಆತನ ಧ್ಯೇಯದ ಕಡೆಗೆ ಕರೆದುಕೊಂಡು ಹೋಗುವ ಸಂಸ್ಥೆ ಮತ್ತು ಸನಾತನದ ಸಾಧಕರು ಎಂದರೆ ವಿವಿಧ ಗುಣಗಳ ಸಮುಚ್ಚಯ !
- ಶಿವಮೊಗ್ಗದ ಕು. ಮೋನಿಕಾ ಆರ್. (೧೮ ವರ್ಷ) ಇವರಿಗೆ ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಬಂದ ನಂತರ ಅರಿವಾದ ಅಂಶಗಳು