
ರಾಮನಾಥಿ (ಫೋಂಡಾ, ಗೋವಾ) – ನವರಾತ್ರ್ಯುತ್ಸವದ ನಿಮಿತ್ತ ಇಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ೧೫ ರಿಂದ ೨೪ ಅಕ್ಟೋಬರ್ ೨೦೨೩ ರ ಕಾಲಾವಧಿಯಲ್ಲಿ ‘ದಶಮಹಾವಿದ್ಯಾಯಾಗ’ ನೆರವೇರಿತು. ‘ಸನಾತನ ಧರ್ಮ ಸಂಸ್ಥಾಪನೆಯು ಆದಷ್ಟು ಬೇಗ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ತಪ್ಪಿ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯವು ಲಭಿಸಬೇಕು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗ ಬೇಕು’, ಎಂಬ ಉದ್ದೇಶದಿಂದ ಈ ಯಾಗವನ್ನು ಮಾಡಲಾಯಿತು. ಈ ಯಾಗದಲ್ಲಿ ಕರುಂಗಾಳಿ ಚೂರ್ಣ ಮತ್ತು ಮೂಲಿಕಾ ಚೂರ್ಣದ ಹವನ ಮಾಡಲಾಯಿತು. ಈ ಯಾಗಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ಯಾಗದ ನಂತರ ಪ್ರತಿದಿನ ಗಾಯನ ಸೇವೆಯನ್ನು ಪ್ರಸ್ತುತ ಪಡಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರನ್ನು ಮತ್ತು ಸಾಧಕಿಯರನ್ನು ಆಹ್ವಾನಿಸಲಾಗಿತ್ತು. ಅದಕ್ಕನುಸಾರ ವಿಶ್ವವಿದ್ಯಾಲಯದ ಸಾಧಕರು ಮತ್ತು ಸಾಧಕಿಯರು ದೇವಿಯ ಆರತಿ, ಭಕ್ತಿಗೀತೆ ಮುಂತಾದ ವಿವಿಧ ಪ್ರಕಾರಗಳಲ್ಲಿನ ಗಾಯನಸೇವೆಯನ್ನು ಪ್ರಸ್ತುತಪಡಿಸಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
ಹಿಂದೂ ರಾಷ್ಟ್ರದ ಬುನಾದಿ ಹಾಕುತ್ತಿರುವ ಸನಾತನ ಆಶ್ರಮದಲ್ಲಿ ನಾನು ಅದ್ಭುತ ಅನುಭೂತಿಯನ್ನು ಪಡೆದೆ ! – ಶ್ರೀ ಭಗವತ ಶರಣ ಮಹಂತ ರಾಧಾಕೃಷ್ಣ ಸ್ವಾಮಿ
ಸನಾತನದ ಆಶ್ರಮ ರಾಮನಾಥಿಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ಶ್ರೀ ಚಂಡಿ ಹೋಮ ಸಂಪನ್ನ
ಭಾರತೀಯ ಸಂತ ಮಹಾಪರಿಷತ್ತಿನ ಸಂತ ಸಮನ್ವಯಕಿ ಸ್ವಾಮಿನಿ ಉನ್ಮೇಷ್ ಭಾರತಿ ಅವರಿಂದ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ!
ಸನಾತನ ಆಶ್ರಮವು ದೇಶಾದ್ಯಂತದ ಹಿಂದೂಗಳಿಗೆ ಸರಿಯಾದ ದಿಕ್ಕನ್ನು ತೋರಿಸುವ ಕೆಲಸ ಮಾಡುತ್ತಿದೆ! – ಸಂಸದ ಡಾ. ಅನಿಲ್ ಬೋಂಡೆ
ವಿಶ್ವ ಹಿಂದೂ ಪರಿಷತ್ತಿನ ಕಾರ್ಯವು ಸ್ಥೂಲದಲ್ಲಿದ್ದರೆ, ಸನಾತನದ ಕಾರ್ಯವು ಸೂಕ್ಷ್ಮದಲ್ಲಿದೆ! – ನ್ಯಾಯವಾದಿ ಅಲೋಕ ಕುಮಾರ, ಅಂತಾರಾಷ್ಟ್ರೀಯ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್