ಅಂತಾರಾಷ್ಟ್ರೀಯ ವಾಯು ತಪಾಸಣಾ ಮಂಡಳಿಯಿಂದ ಪಾಕಿಸ್ತಾನವು ಸುಳ್ಳುಗಾರನೆಂದು ಸಾಬೀತು!

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ಪಂಜಾಬ್ನಲ್ಲಿ ಹುಲ್ಲುಗಳನ್ನು ಸುಡುವುದರಿಂದ ಲಾಹೋರ್ನಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ; ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಕಡೆಗಣಿಸಲಾಗುತ್ತಿರುವುದರಿಂದ ಪಾಕಿಸ್ತಾನಕ್ಕೆ ಕೈಹೊಸೆಯುತ್ತ ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಕಂಡು ಬರುತ್ತಿದೆ.
1. ಭಾರತದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶ ಈ ರಾಜ್ಯಗಳಲ್ಲಿ, ದೀಪಾವಳಿಯ ಮೊದಲು ಹುಲ್ಲುಗಳನ್ನು ಸುಡುವುದರಿಂದ ನವ ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಪ್ರತಿ ವರ್ಷ ಮಾಲಿನ್ಯದಲ್ಲಿ ಬಹಳ ಹೆಚ್ಚಳವಾಗುತ್ತದೆ
2. ಈ ವರ್ಷ ಪಾಕಿಸ್ತಾನದ ಲಾಹೋರ್ನಲ್ಲೂ ಮಾಲಿನ್ಯ ಹೆಚ್ಚಾಗಿದೆ. ಇದಕ್ಕೆ ಭಾರತವೇ ಹೊಣೆ ಎಂದು ಹೇಳುವ ಪ್ರಯತ್ನ ನಡೆಯಿತು. ಪಾಕಿಸ್ತಾನದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ, ಭಾರತದ ಪಂಜಾಬ್ನಲ್ಲಿ ಹುಲ್ಲು ಸುಡುವುದರಿಂದ ಲಾಹೋರ್ನಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಹೇಳಲಾಯಿತು. ಈ ಅಂಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಡಿಸುವ ಬಗ್ಗೆಯೂ ಚರ್ಚೆ ನಡೆಯಿತು.
3. ವಾಸ್ತವವಾಗಿ, ಅಂತರರಾಷ್ಟ್ರೀಯ ವಾಯು ತಪಾಸಣಾ ಮಂಡಳಿಯು ಭಾರತದಲ್ಲಿ ಹುಲ್ಲು ಸುಡುವುದಕ್ಕೂ ಮತ್ತು ಲಾಹೋರ್ನಲ್ಲಿನ ಮಾಲಿನ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಸ್ಥಳೀಯ ಸಮಸ್ಯೆಗಳಿಂದ ಮಾಲಿನ್ಯ ಉಂಟಾಗುತ್ತಿದೆ. ಇದಲ್ಲದೇ ಪಂಜಾಬ್ನಿಂದ ಲಾಹೋರ್ ನ ದಿಕ್ಕಿಗೆ ಗಾಳಿ ಬೀಸುವುದಿಲ್ಲ ಹಾಗಾಗಿ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಸಂಪಾದಕೀಯ ನಿಲುವುನಾಳೆ ಪಾಕಿಸ್ತಾನ ತನ್ನ ದಿವಾಳಿತನಕ್ಕೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಿದರೆ ಆಶ್ಚರ್ಯಪಡಬಾರದು ! |
ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !
ಈಗ ಯುನೈಟೆಡ್ ಕಿಂಗ್ಡಮ್ ಕೂಡ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ನಿರ್ಬಂಧ ಹೇರಿದೆ!
ಜನಸಂಖ್ಯೆ ಮತ್ತು ವಲಸೆ ಮೇಲಿನ ನಿರ್ಬಂಧ ವಿಧಿಸುವ ಪ್ರಸ್ತಾಪವನ್ನು ಬಹುಮತದಿಂದ ತಿರಸ್ಕರಿಸಿದ ಸ್ವಿಸ್ ನಾಗರಿಕರು!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
Russian Oil Imports : ರಷ್ಯಾದಿಂದ ಇಂಧನ ಖರೀದಿಸುವ ಜಗತ್ತಿನ ಎರಡನೇ ಅತಿ ದೊಡ್ಡ ದೇಶವಾದ ಭಾರತ !
ಶಾಂತಿ ಒಪ್ಪಂದದ ವಿರುದ್ಧ ಬೀದಿಗಿಳಿದ ಇರಾನಿ ನಾಗರಿಕರು!