ರಾಜ್ಯದ ಪ್ರಖರ ಹಿಂದುತ್ವನಿಷ್ಟ ಸಂತೋಷ ಕೆಂಚಾಂಬ ಅವರ “ರಾಷ್ಟ್ರ-ಧರ್ಮ ಮಾಧ್ಯಮ” ಫೇಸ್ ಬುಕ್ ಪೇಜ್ ಹ್ಯಾಕ್ !

ಪುಟದಲ್ಲಿ ಅಶ್ಲೀಲ ಚಿತ್ರಗಳು ಮತ್ತು ಸಂದೇಶಗಳನ್ನು ಬಿತ್ತರಿಸಿ ರಾಷ್ಟ್ರ-ಧರ್ಮ ಜಾಗೃತಿ ಕಾರ್ಯಕ್ಕೆ ಕಳಂಕ ತರುವ ಹಿಂದೂವಿರೋಧಿಗಳ ಪ್ರಯತ್ನ!

ಬೆಂಗಳೂರು – ಕರ್ನಾಟಕದ ಪ್ರಖರ ಹಿಂದುತ್ವನಿಷ್ಟ ಮತ್ತು ‘ರಾಷ್ಟ್ರ-ಧರ್ಮ ಮಾಧ್ಯಮ‘ದ ಸಂಸ್ಥಾಪಕ ಶ್ರೀ ಸಂತೋಷ ಕೆಂಚಾಂಬ ಅವರ ಫೇಸ್ ಬುಕ್ ಪೇಜನ್ನು ಹ್ಯಾಕ್ ಮಾಡಲಾಗಿದೆ. ಕಳೆದ ೮ ವರ್ಷಗಳಿಂದ ಈ ಪುಟದ ಮೂಲಕ ರಾಷ್ಟ್ರ,ಧರ್ಮ ಮತ್ತು ಸಂಸ್ಕೃತಿಯ ವಿಷಯವನ್ನು ಪ್ರಸಾರ ಮಾಡಲಾಗುತ್ತಿದೆ. ಈ ಪುಟಕ್ಕೆ ೩ ಲಕ್ಷಕ್ಕೂ ಅಧಿಕ ಫಾಲೊವರ್ಸ್ ಇದ್ದಾರೆ. ಇದರಿಂದಾಗಿಯೇ ರಾಷ್ಟ್ರ ಮತ್ತು ಧರ್ಮ ವಿರೋಧಿಗಳು ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಈ ಪುಟವನ್ನು ಹ್ಯಾಕ್ ಮಾಡಿ ಅದರಲ್ಲಿ ಅಶ್ಲೀಲ ಛಾಯಾಚಿತ್ರಗಳನ್ನು ಪೋಸ್ಟ ಮಾಡಲಾಗಿದೆ.

ಈ ಘಟನೆಯ ಬಗ್ಗೆ ಶ್ರೀ. ಸಂತೋಷ ಕೆಂಚಾಂಬ ಇವರು ಮಾತನಾಡಿ, ವಿಕೃತ ಮನಸ್ಥಿತಿಯ ಜಿಹಾದಿಗಳು ಫೇಸ್ ಬುಕ್ ಪೇಜನ್ನು ಹ್ಯಾಕ್ ಮಾಡಿ ಅಶ್ಲೀಲ ಮತ್ತು ದೇಶವಿರೋಧಿ ಸಂದೇಶಗಳನ್ನು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ಎಷ್ಟೋವರ್ಷಗಳಿಂದ ಈ ಫೇಸ್ ಬುಕ್ ಪೇಜ್ ಮೂಲಕ ಗಣ್ಯರ ಸಂದೇಶಗಳು ಹಾಗೂ ಭಾರತೀಯ ಸಂಸ್ಕೃತಿಯ ಸಂದೇಶವನ್ನು ಪ್ರತಿಮನೆಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಈ ಪೇಜನ್ನು ಅತ್ಯಂತ ಜಾಗೃತಿಯಿಂದ ನಡೆಸುತ್ತಿದ್ದರೂ, ಅದನ್ನು ಜಿಹಾದಿಗಳು ಹ್ಯಾಕ್ ಮಾಡಿದ್ದಾರೆ. ನಮ್ಮ ತಾಂತ್ರಿಕ ವಿಭಾಗವು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ನಮ್ಮ ಫೇಸ್ ಬುಕ್ ಪೇಜನ್ನು ಸುಲಭವಾಗಿಯೇ ಹ್ಯಾಕ್ ಮಾಡಬಹುದು; ಅಂದರೆ ಫೇಸ್ ಬುಕ್ ನ ಭದ್ರತಾವ್ಯವಸ್ಥೆ  ಶೊಚನೀಯವೆಂದೇ ಹೇಳಬೇಕಾಗುತ್ತದೆ. ಈ ಮೂಲಕ ಆಗಿರುವ ತೊಂದರೆಗಾಗಿ, ನಾನು ಎಲ್ಲರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.