ಭರತಪುರ (ರಾಜಸ್ಥಾನ) ಇಲ್ಲಿಯ ಭೂ ವಿವಾದ ಓರ್ವ ವ್ಯಕ್ತಿಯ ಮೇಲೆ ಟ್ರಾಕ್ಟರ್ ಹಾಯಿಸಿ ಹತ್ಯೆ !

ಹತ್ಯೆಯಾದ ವ್ಯಕ್ತಿಯ ದೇಹದ ಮೇಲಿಂದ ೮ ಬಾರಿ ಟ್ರ್ಯಾಕ್ಟರ್ ಹಾದಯಿಸಿದ !

ಭರತಪುರ (ರಾಜಸ್ಥಾನ) – ಇಲ್ಲಿಯ ಭೂ ವಿವಾದದಲ್ಲಿ ಓರ್ವ ವ್ಯಕ್ತಿಯನ್ನು ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಲಾಗಿದೆ. ಆರೋಪಿಯು ಈ ವ್ಯಕ್ತಿಯ ಮೇಲೆ ೮ ಬಾರಿ ಟ್ಯಾಕ್ಟರ್ ಹಿಂದೆ ಮುಂದೆ ಹಾಯಿಸಿ ಅವನ ಹತ್ಯೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ವಿವಾದದಿಂದ ನಡೆದಿರುವ ಹಿಂಸಾಚಾರದಲ್ಲಿ ೧೨ ಜನರು ಗಾಯಗೊಂಡಿದ್ದಾರೆ.

ಬಹದ್ದೂರ್ ಸಿಂಹ ಗುರ್ಜರ ಮತ್ತು ಅತರ ಸಿಂಹ ಗುರ್ಜರ ಇವರ ಕುಟುಂಬದಲ್ಲಿನ ಭೂಮಿಯ ಬಗ್ಗೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಮೂರು ದಿನಗಳ ಹಿಂದೆ ಅವರಲ್ಲಿ ಜಗಳ ಕೂಡ ನಡೆದಿತ್ತು. ಆ ಸಮಯದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ೨೨ ಜನರನ್ನು ಬಂಧಿಸಿದ್ದರು. ಅಕ್ಟೋಬರ್ ೨೫ ರಂದು ಬಹದ್ದೂರ್ ಸಿಂಹ ಗುರ್ಜರ್ ಇವರ ಕಡೆಯ ಜನರು ವಿವಾದಿತ ಭೂಮಿಯಲ್ಲಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಭೂಮಿಯನ್ನು ಉಳಲು ಆರಂಭಿಸಿದರು. ಇದರ ಮಾಹಿತಿ ದೊರೆಯುತ್ತದೆ ಆತರ ಸಿಂಹ ಗುರ್ಜರ್ ಇವರು ಅಲ್ಲಿಗೆ ತಲುಪಿದರು ಮತ್ತು ಅವರಲ್ಲಿ ಜಗಳ ಶುರುವಾಯಿತು. ಆ ಸಮಯದಲ್ಲಿ ೪೫ ವರ್ಷದ ನರಪತ ಸಿಂಹ ಗುರ್ಜರ್ ಇವರು ಟ್ರ್ಯಾಕ್ಟರ್ ತಡೆಯುವ ಪ್ರಯತ್ನ ಮಾಡುವಾಗ ಅವನ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಲಾಯಿತು. ಈ ಘಟನೆಯ ಸಮಯದಲ್ಲಿ ಹೆಚ್ಚಿನ ಗ್ರಾಮಸ್ಥರು ಅಲ್ಲಿ ಉಪಸ್ಥಿತರಿದ್ದರು. ಅವರಲ್ಲಿನ ಯಾರು ಕೂಡ ಜಗಳ ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ. ತದ್ವಿರುದ್ಧ ಗ್ರಾಮಸ್ಥರು ಈ ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಅದರ ವಿಡಿಯೋ ತಯಾರಿಸಿ ಅದನ್ನು ಪ್ರಸಾರ ಮಾಡಿದರು. (ಇಂತಹ ಅಸಂವೇದನಾಶೀಲ ಜನರ ಮೇಲೆ ಭವಿಷ್ಯದಲ್ಲಿ ದೊಡ್ಡ ಸಂಕಟ ಬಂದರೂ ಅವರು ಎಂದಾದರೂ ಸಂಘಟಿತರಾಗಿ ಅದರಿಂದ ತಮ್ಮನ್ನು ತಾವು ರಕ್ಷಿಸಲು ಸಾಧ್ಯವೇ ? – ಸಂಪಾದಕರು)

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ರಾಜ್ಯದಲ್ಲಿ ರಾಜಾರೋಷವಾಗಿ ನಡೆಯುವ ಇಂತಹ ಘಟನೆಗಳಿಂದ ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ !