|

ಮುಂಬಯಿ – ‘ಮಹಾಭಾರತ ಇತಿಹಾಸವೋ ಅಥವಾ ಪುರಾಣವೋ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪರ್ವ: ಧರ್ಮದ ಮಹಾಕಾವ್ಯ’ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಲು ಹೊರಟಿದೆ. ಚಲನಚಿತ್ರವು 3 ಭಾಗಗಳಲ್ಲಿ ತಯಾರಾಗುತ್ತಿದ್ದು, ಶ್ರೇಷ್ಠ ಇತಿಹಾಸಕಾರ ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಬರೆದಿರುವ ಪುಸ್ತಕವನ್ನು ಆಧರಿಸಿ ‘ಪರ್ವ’ ಮೂಡಿಬರುತ್ತಿದೆ ಎಂದು ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ. ಪಲ್ಲವಿ ಜೋಶಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಅಗ್ನಿಹೋತ್ರಿ ಇವರು ಈ ಚಲನಚಿತ್ರದ ಒಂದು ನಿಮಿಷದ ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅಗ್ನಿಹೋತ್ರಿ ಇವರು, ‘ಮಹಾಭಾರತವು ಕೇವಲ ಮಹಾಕಾವ್ಯವೇ ಅಥವಾ ಭಾರತದ ಆತ್ಮವೇ ? ಶತಮಾನಗಳಿಂದ, ಮಹಾಭಾರತವು ಇತಿಹಾಸವೇ ಅಥವಾ ಕೇವಲ ಪುರಾಣವೇ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. 17 ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇತಿಹಾಸಕಾರ ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಅವರು ‘ಪರ್ವ – ಯುದ್ಧ, ಶಾಂತಿ, ಪ್ರೀತಿ, ಸಾವು, ದೇವರು ಮತ್ತು ಮನುಷ್ಯ’ ಎಂಬ ಗ್ರಂಥವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ‘ಮಾಸ್ಟರ್ ಪೀಸ್ ಆಫ್ ಮಾಸ್ಟರ್ ಪೀಸ್’ ಎಂದು ಕರೆಯಲು ಕಾರಣವಿರಬೇಕು. ಈ ಪುಸ್ತಕವನ್ನು ಸಂಸ್ಕೃತ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ಇದಲ್ಲದೆ, ಪುಸ್ತಕವು ಇಂಗ್ಲಿಷ್, ಮ್ಯಾಂಡರಿನ್, ಚೈನೀಸ್ ಮತ್ತು ರಷ್ಯನ್ ಭಾಷೆಗಳಲ್ಲಿಯೂ ಪ್ರಕಾಶಿಸಲಾಗಿದೆ. ಪುಸ್ತಕವು ಪ್ರತಿ ಭಾಷೆಯಲ್ಲೂ ‘ಬೆಸ್ಟ್ ಸೆಲ್ಲರ್’ ಆಗಿದೆ. ಈ ಪುಸ್ತಕವನ್ನು ಆಧರಿಸಿದ ‘ಪರ್ವ’ ಚಲನಚಿತ್ರ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ.’
BIG ANNOUNCEMENT:
Is Mahabharat HISTORY or MYTHOLOGY?
We, at @i_ambuddha are grateful to the almighty to be presenting Padma Bhushan Dr. SL Bhyrappa’s ‘modern classic’:
PARVA – AN EPIC TALE OF DHARMA.There is a reason why PARVA is called ‘Masterpiece of masterpieces’.
1/2 pic.twitter.com/BiRyClhT5c
— Vivek Ranjan Agnihotri (@vivekagnihotri) October 21, 2023
ಸಂಪಾದಕೀಯ ನಿಲುವುಕಳೆದ 200 ವರ್ಷಗಳಲ್ಲಿ, ಮೊದಲು ಬ್ರಿಟಿಷರು ಮತ್ತು ನಂತರ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಭಾರತದ ಇತಿಹಾಸದ ಚಿಂದಿ ಚಿತ್ರಾನ್ನ ಮಾಡಿದ್ದಾರೆ. ಅದಕ್ಕಾಗಿಯೇ ಭಾರತದ ನೈಜ ಇತಿಹಾಸವನ್ನು ಮತ್ತೆ ಬರೆಯುವುದು ಅನಿವಾರ್ಯವಾಗಿದೆ. ನಿರ್ಮಾಪಕ ವಿವೇಕ ರಂಜನ್ ಅಗ್ನಿಹೋತ್ರಿ ಅವರ ಈ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !