ಅವಧೂತ ವಿನಯಗುರುಜಿಯವರು ಪರಾತ್ಪರ ಗುರು ಡಾ. ಆಠವಲೆಯವರ ಮತ್ತು ಅವರ ಕಾರ್ಯದ ಬಗ್ಗೆ ತೆಗೆದ ಗೌರವೋದ್ಗಾರ !
ರಾಮ-ಕೃಷ್ಣರು ಅವತಾರ ತಾಳಿದಂತೆ ಗುರುದೇವರು ಸಹ ಅವತಾರ ತಾಳಿ ಬಂದಿದ್ದು ಸಂಪೂರ್ಣ ವಿಶ್ವಕ್ಕೆ ಜ್ಞಾನದ ಶಿಕ್ಷಣವನ್ನು ನೀಡಲು ಅವರ ಜನ್ಮವಾಗಿದೆ. ಅವರ ಪ್ರತಿಯೊಂದು ಕರ್ಮವು ನಿಷ್ಕಾಮವಾಗಿದೆ. ಇದರೊಂದಿಗೆ ವಿಶ್ವದಲ್ಲಿ ಹಿಂದೂ ಧರ್ಮದ ಪ್ರತಿಷ್ಠಾಪನೆ ಮತ್ತು ಎಲ್ಲರಲ್ಲಿ ಧರ್ಮದ ಸ್ಥಾಪನೆ ಮಾಡಲು ಅವರ ಜನ್ಮವಾಗಿದೆ. ಅವರು ಕರುಣೆಯ ಸಾಗರವಾಗಿದ್ದು ಅವರಲ್ಲಿ ಮೇಲುಕೀಳೆಂಬ ಭೇದಭಾವವಿಲ್ಲ.