ಹಿಂದುಗಳು ಎಚ್ಚೆತ್ತುಕೊಳ್ಳದಿದ್ದರೆ, ಕಾಶ್ಮೀರದಂತಹ ಸ್ಥಿತಿ ಆಗುವುದು ! – ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಂದ ಹಿಂದುಗಳಿಗೆ ಎಚ್ಚರಿಕೆ !

ಅಲವರ (ರಾಜಸ್ಥಾನ) – ಹಿಂದುಗಳೇ ಎಚ್ಚರಾಗಿ, ಇಲ್ಲವಾದರೆ ಕಾಶ್ಮೀರದ ಹಾಗೆ ಸ್ಥಿತಿಯಾಗುವುದು. ನಿಮ್ಮ ಹುಡುಗಿಯ ಸ್ಥಿತಿ ಸಾಕ್ಷಿ (ಮುಸಲ್ಮಾನರು ದೆಹಲಿಯಲ್ಲಿ ಸಾಕ್ಷಿ ಎಂಬ ಹುಡುಗಿಯ ಹತ್ಯೆ ಮಾಡಿದ್ದರು) ಹಾಗೆ ಆಗುವುದು. ನಿಮ್ಮ ಮನೆಗಳು ಸುಡಲಾಗುವುದು. ಅದಕ್ಕಾಗಿ ಎಚ್ಚರಗೊಳ್ಳಿರಿ ಎಂದು ಬಾಗೇಶ್ವರ ಧಾಮನ ಪಂಡಿತ ಧಿರೇಂದ್ರಕೃಷ್ಣ ಶಾಸ್ತ್ರಿ ಇವರು ಇಲ್ಲಿ ಹಿಂದುಗಳಿಗೆ ಕರೆ ನೀಡಿದರು. ಇಲ್ಲಿಯ ಮಾಜಿ ಸಚಿವ ಭಂವರ ಜಿತೇಂದ್ರ ಸಿಂಹ ಇವರ ನಿವಾಸದಲ್ಲಿ ಆಯೋಜಿಸಿರುವ ಧರ್ಮ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ನೀವು ನನಗೆ ಸಹಕಾರ ನೀಡಿ, ನಾನು ನಿಮಗೆ ಹಿಂದೂ ರಾಷ್ಟ್ರ ನೀಡುತ್ತೇನೆ !

ಹಿಂದೂ ರಾಷ್ಟ್ರದ ಬಗ್ಗೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಉಪಸ್ಥಿತರಿಗೆ, ನೀವು ಹಿಂದೂಗಳಾಗಿದ್ದರೆ, ನಿಮ್ಮ ಮನೆಯ ಮೇಲೆ ಕೇಸರಿ ಧ್ವಜ ಹಾರಿಸಿ, ಹಣೆಯ ಮೇಲೆ ತಿಲಕ ಹಚ್ಚಿ, ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ಸಿದ್ದರಾಗಿ. ನಾನು ಬದುಕಿದರೆ, ಹಿಂದೂ ರಾಷ್ಟ್ರ ಮಾಡುವ ಸಂಕಲ್ಪ ಬೇಗನೆ ಪೂರ್ಣಗೊಳ್ಳುವುದು. ನೀವು ನನಗೆ ಸಹಕಾರ ನೀಡಿ, ನಾನು ನಿಮಗೆ ಹಿಂದೂ ರಾಷ್ಟ್ರ ನೀಡುತ್ತೇನೆ. ಇದಕ್ಕಾಗಿ ಮನೆಯ ಹೊರಗೆ ಬರಬೇಕಾಗುವುದು. ಆದರೆ ಕುಂಭಕರ್ಣನಗಿಂತಲೂ ಹೆಚ್ಚಾಗಿ ಯಾರಾದರೂ ನಿದ್ರಿಸಿದ್ದರೆ ಆಗ ಅವರು ಸನಾತನಿ ಆಗಿರುವನು ಎಂದು ಹೇಳಿದರು.