ಚಕಮಕಿಯ ನಂತರ ಪೊಲೀಸರ ಕಾರ್ಯಾಚರಣೆ

ರಾಮಪುರ (ಉತ್ತರ ಪ್ರದೇಶ) – ರಾಮಪುರ ಮತ್ತು ಶ್ರಾವಸ್ತಿಯಲ್ಲಿ ಗೋಸಾಗಾಟಗಾರರನ್ನು ಸೆರೆಹಿಡಿಯುವ ವೇಳೆ ನಡೆದ ಘರ್ಷಣೆಯಲ್ಲಿ ಗೋಸಾಗಾಟಗಾರರು ಗಾಯಗೊಂಡರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.
#एसपी_रामपुर के निर्देशन में जनपद रामपुर में अपराध एवं अपराधियों के विरूद्ध चलाये जा रहे अभियान के दौरान थाना टांडा व थाना स्वार क्षेत्रान्तर्गत गौतस्करों के साथ हुई पुलिस मुठभेड़ में 04 शातिर गौतस्कर घायल/गिरफ्तार ।#UPPolice #UPPInNews #RampurPoliceInNews pic.twitter.com/knE0J0YNVR
— Rampur police (@rampurpolice) October 5, 2023
1. ರಾಮಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು 4 ಗೋಸಾಗಾಟಗಾರರನ್ನು ಸುತ್ತುವರಿದಿದ್ದರು. ಇಲ್ಲಿನ ಗೋವಂಶವನ್ನು ಅಮಾನವೀಯವಾಗಿ ಕಟ್ಟಿ ಹಾಕಿದ್ದರು. ಪೊಲೀಸರು ಗೋಸಾಗಾಟಗಾರರನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಗುಂಡು ಹಾರಿಸಿದರು. (ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಉದ್ಧಟತನ ಹೊಂದಿರುವ ಗೋಸಾಗಾಟಗಾರರು ! – ಸಂಪಾದಕರು) ಆ ಸಮಯದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಫಹೀಮ್ ಮತ್ತು ಸಲೀಂ ಅವರ ಕಾಲಿಗೆ ಗುಂಡು ತಗಲಿತು; ಆದರೆ ಉಳಿದ ಇಬ್ಬರು ಪರಾರಿಯಾದರು. ಈ ಎನ್ಕೌಂಟರ್ನಲ್ಲಿ ಒಬ್ಬ ಪೊಲೀಸ್ ಸಹ ಗಾಯಗೊಂಡಿದ್ದಾರೆ. ಪೊಲೀಸರು ಇಲ್ಲಿಂದ ಒಂದು ಹಸು, 1 ವಾಹನ, 1 ಪಿಸ್ತೂಲ್, 7 ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.
2. ಶ್ರಾವಸ್ತಿಯಲ್ಲಿ ನಡೆದ ಎನ್ಕೌಂಟರ್ ನಂತರ 6 ಗೋಸಾಗಾಟಗಾರರನ್ನು ಬಂಧಿಸಲಾಯಿತು. ಈ ಪೈಕಿ 5 ಗೋಸಾಗಾಟಗಾರರಿಗೆ ಗುಂಡು ತಗಲಿ ಗಾಯಗೊಂಡಿದ್ದರು. ಅವರಿಂದ 4 ಹಸುಗಳು, 5 ಪಿಸ್ತೂಲ್, ಚಾಕು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ