ಇಡಿಯಿಂದ ಬಂಗಾಲ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ದಾಳಿ !

ತೃಣಮೂಲ ಕಾಂಗ್ರೆಸ್ಸಿನ ಸಚಿವರ ನಿವಾಸದ ದಾಳಿ

ನವ ದೆಹಲಿ – ಇಡಿ ಮತ್ತು ತೆರಿಗೆ ಇಲಾಖೆಯಿಂದ ಬಂಗಾಲ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಅಕ್ಟೋಬರ್ ೫ ರಂದು ದಾಳಿ ನಡೆದಿವೆ. ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದಲ್ಲಿನ ಸಚಿವ ರತಿನ ಘೋಷ ಇವರ ನಿವಾಸ ಮೇಲೆ ಹಾಗೂ ಅವರಿಗೆ ಸಂಬಂಧ ಪಟ್ಟ ಇನ್ನಿತರ ೧೨ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ರಾಜ್ಯದಲ್ಲಿನ ಉತ್ತರ ೨೪ ಪರಗಣಾ ಜಿಲ್ಲೆಯಲ್ಲಿನ ಟಿಟಾಗಡ ನಗರ ಪಾಲಿಕೆಯ ಮಾಜಿ ಅಧ್ಯಕ್ಷ ಪ್ರಶಾಂತ ಚೌದರಿ ಇವರ ನಿವಾಸ ಸ್ಥಾನದಲ್ಲಿ ಇಡಿಯಿಂದ ದಾಳಿ ನಡೆಸಿ ಅವರ ವಿಚಾರಣೆ ನಡೆಸಿದರು. ನಗರ ಪಾಲಿಕೆಯಲ್ಲಿನ ಕಾರ್ಮಿಕ ನೇಮಕಾತಿ ಹಗರಣದ ಪ್ರಕರಣದಲ್ಲಿ ಪ್ರಶಾಂತ ಚೌದರಿ ಇವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ತೆಲಂಗಾಣದ ಭಾಗ್ಯನಗರದಲ್ಲಿ ತೆರಿಗೆ ಇಲಾಖೆಯಿಂದ ಅಧಿಕಾರರೂಢ ಸಮಿತಿಯ ಸಂಸದ ಮಂಗತಿ ಗೋಪಿನಾಥ ಇವರ ಮನೆಯ ಮೇಲೆ ದಾಳಿ ನಡೆಯಿತು. ಹಾಗೂ ತಮಿಳುನಾಡಿನ ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ ಪ್ರಗತಿ ಸಂಘ) ಪಕ್ಷದ ಶಾಸಕ ಎಸ್. ಜಗತರಕ್ಷಕ ಇವರ ಸ್ಥಳಗಳಲ್ಲಿ ದಾಳಿ ನಡೆದವು.