ಸನಾತನ ಧರ್ಮವನ್ನು ನಾಶಗೊಳಿಸುವ ಬಗ್ಗೆ ಮಾತನಾಡುವ ಉದಯನಿಧಿಯ ಸಹೋದರಿಯಿಂದ ದೇವಸ್ಥಾನಕ್ಕೆ ಹೋಗಿ ದರ್ಶನ !

ಚೆನೈ – ತಮಿಳನಾಡುವಿನ ಮುಖ್ಯಮಂತ್ರಿ ಎಮ್.ಕೆ. ಸ್ಟ್ಯಾಲಿನ್‌ ಇವರ ಮಗಳು ಸೇಂಥಮರೈ ಸ್ಟ್ಯಾಲಿನ್ ಇವರು ಮಯಿಲಾದುಥುರೈ ಜಿಲ್ಲೆಯ ಸತ್ತೈನಾಥರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಸತ್ತೈನಾಥರ ದೇವಸ್ಥಾನವನ್ನು ಬ್ರಹ್ಮಪುರೇಶ್ವರ ದೇವಸ್ಥಾನ ಮತ್ತು ಥೋನಿಯಾಪ್ಪರ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದೊಂದು ಶಿವ ಮಂದಿರವಿದೆ. ಸೇಂಥಮರೈ ಇವರ ಸಹೋದರ ಉದಯನಿಧಿ ಇವರು ‘ಸನಾತನ ಧರ್ಮವನ್ನು ನಷ್ಟಗೊಳಿಸಲಾಗುವದು’, ಎಂದು ಹೇಳಿಕೆ ನೀಡಿದ್ದರಿಂದ ಸೇಂಥಮರೈ ದೇವಸ್ಥಾನಕ್ಕೆ ಹೋಗಿದ್ದರಿಂದ ರಾಜಕೀಯ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ.