ಆಸಿಫ್‌ ನಿಂದ ಹಿಂದೂ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಮರಿಗೆ ಬೆದರಿಕೆ ಹಾಕುವ ಫಲಕ !

ಗುರುಗ್ರಾಮದಲ್ಲಿ ವಿಹಿಂಪ ಮತ್ತು ಬಜರಂಗದಳದ ಅಪಮಾನ ಮಾಡುವ ಸಂಚು ಬಹಿರಂಗ !

ಗುರುಗ್ರಾಮ್‌ (ಹರಿಯಾಣ) – ಗುರುಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಮತ್ತು ಬಜರಂಗದಳದ ಅಪಮಾನ ಮಾಡುವ ಮುಸಲ್ಮಾನರು ಸಂಚು ರೂಪಿಸಿರುವುದು ಬಹಿರಂಗವಾಗಿದೆ. ಇಲ್ಲಿನ ಆಸಿಫ್‌ ಹೆಸರಿನ ಮುಸ್ಲಿಂ ಯುವಕ ವಿಹಿಂಪ ಮತ್ತು ಬಜರಂಗದಳದ ಹೆಸರಿನ ಫಲಕಗಳನ್ನು ನಗರದಲ್ಲಿ ಹಾಕಿದ್ದಾನೆ. ಈ ಫಲಕದಲ್ಲಿ ಮುಸಲ್ಮಾನರಿಗೆ ಬೆದರಿಕೆ ನೀಡುವ ಬರಹಗಳಿದ್ದವು. ಇದರೊಂದಿಗೆ ಈ ಫಲಕದಲ್ಲಿ ಕೊಳೆಗೇರಿಗಳನ್ನು ಕಾಲಿ ಮಾಡುವ ಸಂಬಂಧಿಸಿದಂತೆ ವಿಷಯವಿತ್ತು, ಎನ್ನಲಾಗಿದೆ. ಈ ಆಧಾರದ ಮೇಲೆ ಇಸ್ಲಾಮಿಕ್‌ ಸಮುದಾಯ, ಕಮ್ಯುನಿಸ್ ಗುಂಪುಗಳು ಮತ್ತು ಕಾಂಗ್ರೆಸ್‌ ಪಕ್ಷದ ನಾಯಕ ಇವರು ಹಿಂದೂ ಸಂಘಟನೆಗಳನ್ನು ಅಪಮಾನ ಮಾಡಲು ಪ್ರಯತ್ನಿಸಿತು. ಈ ಫಲಕ ಹಾಕಿದಕ್ಕೆ ಪೊಲೀಸರು ಉತ್ತರಖಂಡದಲ್ಲಿನ ನಿವಾಸಿ ಆಸಿಫ್‌ ಎಂಬಾತನನ್ನು ಬಂಧಿಸಿದ್ದು, ಆತ ಅಪರಾಧ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪರಿಶೀಲಿಸದೆ ಮಾಧ್ಯಮಗಳು ಹಿಂದೂ ಸಂಘಟನೆಗಳನ್ನು ದೂಷಿಸಿದವು !

ಹಿಂದೂ ಸಂಘಟನೆಗಳ ವಿರುದ್ಧ ನಿರಂತರ ದಾರಿ ತಪಪ್ಇಸುವ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ವಾರ್ತಾ ವಾಹಿನಿಯು ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳನ್ನು ದೂರಿವೆ. ಪೊಲೀಸ್‌ ತನಿಖೆಗೆ ಕಾಯದೆ, ಈ ವಾರ್ತಾ ವಾಹಿನಿಯು ವಿಹಿಂಪ ಮತ್ತು ಬಜರಂಗದಳವನ್ನು ಟೀಕಿಸಲು ಪ್ರಾರಂಭಿಸಿದ್ದವು.

ಸಂಪಾದಕೀಯ ನಿಲುವು

ಹೇಗಾದರೂ ಮಾಡಿ ಹಿಂದೂ ಸಂಘಟನೆಗಳ ಅಪಮಾನ ಮಾಡುವ ಮತಾಂಧ ಮುಸಲ್ಮಾನರ ಷಡ್ಯಂತ್ರ ಅರಿತುಕೊಳ್ಳಿ ! ಈ ಬಗ್ಗೆ ಪ್ರಗತಿಪರರು ಮತ್ತು ಕಾಂಗ್ರೆಸ್ಸಿಗರು ಏಕೆ ಮೌನವಾಗಿದ್ದಾರೆ ?