ಗ್ವಾಲಿಯರ್ (ಮಧ್ಯಪ್ರದೇಶ)ದಲ್ಲಿ ಧ್ವನಿವರ್ಧಕದಲ್ಲಿ ಶ್ರೀ ಗಣೇಶನ ಆರತಿ ಹಾಕಿದ್ದರಿಂದ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ

೪ ಜನರಿಗೆ ಗಾಯ

ಗ್ವಾಲಿಯರ್ (ಮಧ್ಯಪ್ರದೇಶ) – ಇಲ್ಲಿನ ಪ್ರಜಾಪತಿ ಮೊಹಲ್ಲಾದಲ್ಲಿ ಗಣೇಶೋತ್ಸವ ಮಂಟಪದಲ್ಲಿ ಧ್ವನಿವರ್ಧಕದ ಮೂಲಕ ಶ್ರೀ ಗಣೇಶನ ಆರತಿ ಹಾಕಿದ್ದರಿಂದ ನೆರೆಯ ಸಲ್ಮಾನ್, ಛೊಟು ಖಾನ್, ಇಫ್ರಾನ್, ಪರ್ವೆಜ್ ಮತ್ತು ಇತರ ಕೆಲವು ಮುಸಲ್ಮಾನರು ಕತ್ತಿ-ಕೋಲುಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಿದರು. ಇದರಲ್ಲಿ ಓರ್ವ ಮಹಿಳೆ, ಒಬ್ಬ ಹುಡುಗ ಮತ್ತು ಇನ್ನಿಬ್ಬರು, ಹೀಗೆ ೪ ಹಿಂದುಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ಪೊಲೀಸರು ಸದ್ಯ ಇಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪ್ರಜಾಪತಿ ಮೊಹಲ್ಲಾದಲ್ಲಿ ಗಣೇಶೋತ್ಸವ, ನವರಾತ್ರೋತ್ಸವ ಮತ್ತು ಮೋಹರಂ ಸಮಯದಲ್ಲಿ ಯಾವಾಗಲೂ ವಿವಾದಗಳಾಗಿ ಉದ್ವಿಗ್ನತೆ ಉಂಟಾಗುತ್ತಿರುತ್ತವೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರವಿದ್ದಾಗ ಇಂತಹ ಘಟನೆಗಳು ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎಂದು ಕೂಗಾಡುವವರು ಈ ಘಟನೆಯ ಬಗ್ಗೆ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !