ಕ್ರಿಶ್ಚಿಯನ್ ಗುರುತನ್ನು ಮರೆಮಾಚಿ ಮದುವೆಯಾಗಿದ್ದಾರೆಂದು ಆರೋಪ
ದೇವರೆದುರು ಹಚ್ಚಿದ ಉದಬತ್ತಿ ಪರಿಮಳವನ್ನು ಶವದ ದುರ್ನಾತಕ್ಕೆ ಹೋಲಿಸಿದ ಘಟನೆ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ವೈ.ಎಸ್.ಆರ್. ಕಾಂಗ್ರೆಸ್ (ಯುವಜನ ಶ್ರಮಿಕ ರೈತು ಕಾಂಗ್ರೆಸ್ – ಯುವಕ, ಕಾರ್ಮಿಕ ಮತ್ತು ರೈತರ ಕಾಂಗ್ರೆಸ್) ಪಕ್ಷದ ಹಿರಿಯ ನಾಯಕ ಜೋಗಿ ರಮೇಶ್ ಮತ್ತು ಅವರ ಕುಟುಂಬದ ವಿರುದ್ಧ ಅವರ ಸೊಸೆ ಮೇಘನಾ ಅವರು ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.
Ex-Andhra minister Jogi Ramesh's daughter-in-law accuses Jogi family of concealing religious conversion
The complaint alleges family concealed Christian identity before marriage and made derogatory remarks about Hindu religious practices.
It was previously claimed that "over… pic.twitter.com/2i0ELzX7K6
— Sanatan Prabhat (@SanatanPrabhat) July 27, 2026
ದೂರಿನಲ್ಲಿ ಮೇಘನಾ ಅವರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. “ಮದುವೆ ನಿಶ್ಚಯವಾಗುವಾಗ ಜೋಗಿ ರಮೇಶ್ ಅವರ ಕುಟುಂಬವು ತಾವು ಹಿಂದೂ ಕುಟುಂಬ ಎಂದು ಹೇಳಿಕೊಂಡಿತ್ತು ಮತ್ತು ಮದುವೆಯು ಹಿಂದೂ ಸಂಪ್ರದಾಯ ಮತ್ತು ಪರಂಪರೆಯಂತೆಯೇ ನಡೆದಿತ್ತು; ಆದರೆ ಗಂಡನ ಮನೆಗೆ ಬಂದ ನಂತರ ಈ ಕುಟುಂಬ ವಾಸ್ತವವಾಗಿ ಕ್ರಿಶ್ಚಿಯನ್ ಕುಟುಂಬ ಎಂಬುದು ಕ್ರಮೇಣ ಅರಿವಾಯಿತು. ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿತ್ತು. ಇದೊಂದು ದೊಡ್ಡ ವಂಚನೆಯಾಗಿದೆ. ಒಮ್ಮೆ ನಾನು ಮನೆಯಲ್ಲಿ ಪೂಜೆ ಮಾಡುವಾಗ ದೇವರೆದುರು ಉದಬತ್ತಿ ಹಚ್ಚಿದಾಗ, ಗಂಡನ ಮನೆಯವರು ಕೋಪಗೊಂಡರು. ಧೂಪದ ಸುಗಂಧವನ್ನು ಗೇಲಿ ಮಾಡಿದರು ಮತ್ತು ಅದನ್ನು ಶವದಿಂದ ಬರುವ ದುರ್ನಾತಕ್ಕೆ ಹೋಲಿಸಿದರು. ನಾನು ಇದನ್ನು ವಿರೋಧಿಸಿದಾಗ ನನಗೆ ಬೆದರಿಕೆ ಹಾಕಲಾಯಿತು ಹಾಗೂ ಮನೆಯ ವಿಷಯಗಳನ್ನು ಅಥವಾ ಧರ್ಮಕ್ಕೆ ಸಂಬಂಧಿಸಿದ ಸತ್ಯವನ್ನು ತವರು ಮನೆಯವರಿಗೆ ತಿಳಿಸಬೇಡ ಎಂದು ಎಚ್ಚರಿಕೆ ನೀಡಲಾಯಿತು. ನಾನು ಸುಮ್ಮನಿರದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಭರವಸೆ ನೀಡಿದ್ದಾರೆ.
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!
ಕಾಕ್ರೋಚ್ ಜನತಾ ಪಕ್ಷದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಇ-೨೦ ಜನತಾ ಪಕ್ಷ’ದ ಸ್ಥಾಪನೆ