ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ

ನವ ದೆಹಲಿ – ದೆಹಲಿಯಲ್ಲಿ ಕಾಕರೋಚ್ ಜನತಾ ಪಕ್ಷದ ಪ್ರತಿಭಟನೆಯ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಖಂಡಿಸಿದವು. ಈ ವಿಷಯವಾಗಿ ಉಂಟಾದ ಗದ್ದಲದಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಕಾರ್ಯ-ಕಲಾಪವನ್ನು ಮಧ್ಯಾಹ್ನ ೨ಗಂಟೆಯವರೆಗೆ ಸ್ಥಗಿತಗೊಳಿಸಲಾಯಿತು.

ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ವಿಧೇಯಕದ ಕುರಿತು ಚರ್ಚೆ

ಲೋಕಸಭೆಯಲ್ಲಿ ಮಧ್ಯಾಹ್ನ ೨ ಗಂಟೆಗೆ ಕಲಾಪ ಪುನರಾರಂಭಗೊಂಡ ನಂತರ ‘ಸಾರ್ವಜನಿಕ ಪರೀಕ್ಷೆಗಳು (ಅನುಚಿತ ಮಾರ್ಗಗಳ ತಡೆಗಟ್ಟುವಿಕೆ) ತಿದ್ದುಪಡಿ ವಿಧೇಯಕ, ೨೦೨೬’ರ ಮೇಲೆ ಚರ್ಚೆ ಪ್ರಾರಂಭವಾಯಿತು. ಈ ವಿಧೇಯಕದ ಮೂಲಕ ೨೦೨೪ ರಲ್ಲಿ ಅಂಗೀಕರಿಸಲ್ಪಟ್ಟ ಕಾಯಿದೆಯಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಕೇಂದ್ರದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಪ್ರಸ್ತುತ ಈ ವಿಧೇಯಕದ ಕುರಿತು ಸರಕಾರದ ನಿಲುವನ್ನು ಮಂಡಿಸಲಿದ್ದಾರೆ.