‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ

ಹಿಂದೂ ಜನಜಾಗೃತಿ ಸಮಿತಿಯ ವಿರೋಧಕ್ಕೆ ಸಿಕ್ಕ ಜಯ!

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿ ಭಾವನೆಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ)

ಮುಂಬಯಿ – ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸುವ ‘ಕನ್ಫರ್ಮ್ ಟಿಕೆಟ್’ ಸಂಸ್ಥೆಯ ಜಾಹೀರಾತಿನಲ್ಲಿ ಶ್ರೀ ಗಣೇಶನ ಚಿತ್ರವನ್ನು ಬಳಸಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ತೀವ್ರ ವಿರೋಧದ ನಂತರ, ಈ ಸಂಸ್ಥೆಯು ಆ ಜಾಹೀರಾತನ್ನು ಹಿಂಪಡೆದಿದೆ.

ಹಿಂದೂಗಳ ದೇವತೆಗಳ ಚಿತ್ರಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು ಮತ್ತು ಅವರ ಶ್ರದ್ಧೆಗೆ ಧಕ್ಕೆ ತರುವಂತಹ ಜಾಹೀರಾತುಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಲು ಸಾಧ್ಯವಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯು ಸ್ಪಷ್ಟಪಡಿಸಿತ್ತು. ಸಮಿತಿಯ ಕರೆಯ ಮೇರೆಗೆ ಅನೇಕ ಹಿಂದೂ ಸಂಘಟನೆಗಳು ಮತ್ತು ಧರ್ಮಪ್ರೇಮಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ವಿರೋಧವನ್ನು ದಾಖಲಿಸಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ಮುಖ್ಯ ಬೇಡಿಕೆಗಳು

೧. ‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಈ ಜಾಹೀರಾತನ್ನು ಎಲ್ಲಾ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ತಕ್ಷಣವೇ ತೆಗೆದುಹಾಕಬೇಕು.

೨. ಭವಿಷ್ಯದಲ್ಲಿ ಹಿಂದೂಗಳ ದೇವತೆಗಳ ಚಿತ್ರಗಳನ್ನು ಯಾವುದೇ ವಾಣಿಜ್ಯ ಪ್ರಚಾರಕ್ಕಾಗಿ ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಬೇಕು.

೩. ಸಂಸ್ಥೆಯು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು.